ಕರಾವಳಿ

ಜಿಲ್ಲಾ ಕಾರ್ಮಿಕರ ವೇದಿಕೆಯಿಂದ ವಕೀಲರ ದಿನಾಚರಣೆ ; ರವಿಕಿರಣ್ ಮುರ್ಡೇಶ್ವರರಿಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ವಕೀಲರ ದಿನಾಚರಣೆಯ ಅಂಗವಾಗಿ ಕರ್ನಾಟಕ ಕಾರ್ಮಿಕರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ರವಿ ಶಾಸ್ತ್ರೀ ಬನ್ನಂಜೆ ನೇತೃತ್ವದಲ್ಲಿ ಶನಿವಾರದಂದು ಉಡುಪಿಯಲ್ಲಿ ವಕೀಲರಿಗೆ ಹೂ ನೀಡಿ ಸಿಹಿ ಹಂಚಿ ಹಾಗೂ ಕುಂದಾಪುರದ ಖ್ಯಾತ ವಕೀಲರಾದ ರವಿಕಿರಣ್ ಮುರ್ಡೇಶ್ವರ ಅವರಿಗೆ ವಕೀಲರ ದಿನಾಚರಣೆ ಶುಭಾಶಯದೊಂದಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು .

ಈ ಸಂದರ್ಭದಲ್ಲಿ ಕಾರ್ಮಿಕರ ವೇದಿಕೆಯ ಜಿಲ್ಲಾಧ್ಯಕ್ಷ ರವಿಶಾಸ್ತ್ರಿ ಬನ್ನಂಜೆ ಎಲ್ಲಾ ವಕೀಲರಿಗೂ ವಕೀಲರ ದಿನಾಚರಣೆ ಶುಭಾಶಯ ಕೋರಿ ಶುಭ ಹಾರೈಸಿದರು .

 

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕರ್ನಾಟಕ ಕಾರ್ಮಿಕರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಡಾ.ರವಿ ಶೆಟ್ಟಿ ಬೈಂದೂರು ಮಾತನಾಡಿ ಒಂದು ಬಡ ಕುಟುಂಬಕ್ಕೂ ನ್ಯಾಯ ದೊರಕಿಸುವಲ್ಲಿ ವಕೀಲರ ಕಾರ್ಯ ಮಹತ್ವದ್ದಾಗಿದ್ದು ಅಂತ ಕಾರ್ಯದಲ್ಲಿ ನಿರತರಾಗಿರುವ ವಕೀಲ ಗೆಳೆಯರ ಕಾರ್ಯ ಶ್ಲಾಘನೀಯ ಹಾಗೂ ಸರ್ವರಿಗೂ ಸಮಾನ ನ್ಯಾಯ ಕೊಡಿಸುವಂತ ಒಂದು ದಿಟ್ಟ ನಿರ್ಧಾರ ವಕೀಲರಿಂದ ಮಾತ್ರ ಸಾಧ್ಯ . ಇಂತಹ ನ್ಯಾಯವಾದಿಗಳ ದಿನಾಚರಣೆಯನ್ನು ಆಚರಿಸುವುದು ನಮಗೆ ಹೆಮ್ಮೆಯ ವಿಷಯ ಎಂದರು .

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಚಂದ್ರ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಸುರೇಶ್ ಶೇರಿಗಾರ್ ಜಿಲ್ಲಾ ಕಾರ್ಯದರ್ಶಿ ಸಂದೀಪ್ ಕೊಡಂಕೂರು, ಸಾಹಿತಿ ವೀರಣ್ಣ ಕುರುವತ್ತಿ ಗೌಡರ್, ಸುಬ್ರಹ್ಮಣ್ಯ ಬೈಂದೂರು, ಮುಖಂಡರಾದ ಹರೀಶ್ ಮತ್ತು ಶಿವನ ನಾಯಕ ಹಾಗೂ ಬೈಂದೂರು ಘಟಕದ ಕಾರ್ಯಕರ್ತರು ಜಿಲ್ಲಾ ಘಟಕದ ಕಾರ್ಯಕರ್ತರು ಮೊದಲಾದವರಿದ್ದರು .

Comments are closed.