ಕುಂದಾಪುರ: ಇಲ್ಲಿನ ಮೆಸ್ಕಾಂ ಕಚೇರಿ ಬಳಿ ಮಂಗವಾರ ಸಂಜೆ ಜೆಸಿಬಿ ಅವಾಂತರದಿಂದ ಆರಕ್ಕೂ ಮಿಕ್ಕ ವಿದ್ಯುತ್ ಕಂಬ ನೆಲಕ್ಕೆ ಉರಳಿದ್ದು, ಕುಂದಾಪುರ ಕತ್ತಲಲ್ಲಿ ಮುಳಗಿದೆ. ಬದಲಿ ವ್ಯವಸ್ಥೆಗಾಗಿ ಮೆಸ್ಕಾಂ ಅಧಿಕಾರಿಗಳು ಶ್ರಮಿಸಿದ ತರುವಾಯ 10.30ರ ಬಳಿಕ ವಿದ್ಯುತ್ ಸಂಪರ್ಕ ಸುವ್ಯವಸ್ಥೆಗೆ ಬಂದಿದೆ.
ಬಸ್ರೂರು ಮೂರುಕೈ ಬಳಿ ನವಯುಗ ಕಂಪನಿ ಅಂಡರ್ ಪಾಸ್ ಕಾಮಗಾರಿ ನಡೆಸುತ್ತಿದ್ದು, ಮಣ್ಣಿನ ಕೆಲಸ ಮಾಡುತ್ತಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಜೆಸಿಬಿ ಬಕೆಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ವಿದ್ಯುತ್ ಲೈನ್ ಶಾರ್ಟ್ ಸಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನೋಡಿದ ಜೆಸಿಬಿ ಚಾಕ ಹೆದರಿ ಜೆಸಿಬಿ ಮತ್ತಷ್ಟು ಕಂಗಾಲಾಗಿ ವೇಗವಾಗಿ ಚಲಾಯಿಸುವಾಗ ಮತ್ತಷ್ಟು ಕಂಬಕ್ಕೆ ಡಿಕ್ಕಿ ಹೊಡೆದು ಸುಮಾರು ಆರು ಕಂಬ ನೆಲಕ್ಕೆ ಉರಿಳಿದೆ. ವಿದ್ಯುತ್ ತಂತಿ ಧರಾಶಯಿಯಾಗಿದ್ದು, ಟಿಸಿ, ಡಿಸಿ ಕೂಡಾ ಡ್ಯಾಮೇಜ್ ಆಗಿದೆ. ಲಕ್ಷಾಂತರ ರೂ ನಷ್ಟ ಸಂಭವಿಸಿದ್ದು, ಮೆಸ್ಕಾಂ ಅಧಿಕಾರಿಗಳು ಬದಲಿ ವ್ಯವಸ್ಥೆಗೆ ಪ್ರಯತ್ನಿಸಿದ್ದರು.
Comments are closed.