ಕರಾವಳಿ

ಕೊಲ್ಲೂರು ಮೂಕಾಂಬಿಕೆಗೆ 1 ಕೆ.ಜಿ ಚಿನ್ನದ ಖಡ್ಗ ನೀಡಿದ ಭಕ್ತ

Pinterest LinkedIn Tumblr

ಕುಂದಾಪುರ: ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆಗೆ 1 ಕೆ.ಜಿ ಚಿನ್ನದ ಖಡ್ಗವನ್ನು ಸಮರ್ಪಣೆ ಮಾಡಲಾಗಿದೆ. ಕೊಲ್ಲೂರು ತಾಯಿಗೆ ಖಡ್ಗ ನೀಡುವ ಹರಕೆ ಹಿನ್ನೆಲೆ ಚಿನ್ನದ ಖಡ್ಗವನ್ನು ನೀಡಿ ಹರಕೆ ಸಮರ್ಪಿಸಲಾಗಿದೆ.

ಕೊಯಮತ್ತೂರು ಮೂಲದ ಡಾ. ನಳಿನ್ ವಿಮಲ್ ಕುಮಾರ್ ಎನ್ನುವ ಭಕ್ತರೋರ್ವರು ಈ ಹರಕೆ ಸಲ್ಲಿಸಿದ್ದು ಇವರು ಅಲ್ಲಿನ ವಿದ್ಯಾಸಂಸ್ಥೆಯಲ್ಲಿ ಆಡಳಿತ ನಿರ್ದೇಶಕರಾಗಿದ್ದಾರೆ. ಸುಮಾರು ೨೯ ಲಕ್ಷ ಅಂದಜು ಮೌಲ್ಯದ ಸ್ವರ್ಣ ಖಡ್ಗ ಇದಾಗಿದೆ. ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರಿಗೆ ಹಸ್ತಾಂತರಿಸಲಾಗಿದೆ. ಈ ಸಂದರ್ಭ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.

Comments are closed.