ಕುಂದಾಪುರ: ಇಲ್ಲಿನ ಕೊಲ್ಲೂರು ಸಮೀಪದ ಇಡೂರು ಕುಂಜ್ಞಾಡಿ ಹೆದ್ದಾರಿಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಆ್ಯಕ್ಟಿವಾ ಹೋಂಡಾ ಸವಾರ ಸಾವನ್ನಪ್ಪಿದ್ದು ಸಹ ಸವಾರ ಗಂಭೀರ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಲ್ಲೂರಿನಿಂದ ಕುಂದಾಪುರ ಕಡೆ ಬರುತ್ತಿದ್ದ ನೋಂದಣಿಯಾಗದ ಜೀತೋ ವ್ಯಾನ್ ಮತ್ತು ಕೊಲ್ಲೂರು ಕಡೆ ಸಾಗುತ್ತಿದ್ದ ಆ್ಯಕ್ಟಿವಾ ಹೋಂಡಾ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸವಾರ ಸತೀಶ್ ಶೆಟ್ಟಿ (32)ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟರು. ಸಹ ಸವಾರ ಅರೆಶಿರೂರು ನಿವಾಸಿ ಪ್ರಕಾಶ್ ಗಾಯಗೊಂಡಿದ್ದಾರೆ. ಅಲ್ಲದೇ ಜೀತೋ ವ್ಯಾನ್ ಚಾಲಕ ರೋಹಿತ್ ಹಾಗು ವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದ ಸುಮುಖ್ ಹಾಗು ಶ್ರೀನಿವಾಸ ಕೂಡ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.