ಉಡುಪಿ: ನಾಗರಹೊಳೆ ಅಭಯಾರಣ್ಯ ಹುಣಸೂರು ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಶಿರೂರು ಮಠದ ಲಕ್ಷ್ಮೀಶ ಎಂಬ ಗಂಡಾನೆ ಸಂಶಯಾಸ್ಪದವಾಗಿ ಮೃತಪಟ್ಟಿದೆ.
ಐದು ವರ್ಷ ಹಿಂದೆ ಉಪ್ಪಿನಂಗಡಿಯಿಂದ ಮತ್ತಿಗೋಡು ಶಿಬಿರಕ್ಕೆ ಆನೆಯನ್ನು ಕರೆದೊಯ್ಯಲಾಗಿತ್ತು. 20 ದಿನಗಳ ಹಿಂದೆ ಮೇಯಲು ಬಿಟ್ಟಿದ್ದ ವೇಳೆ ಶಿಬಿರದಿಂದ ನಾಪತ್ತೆಯಾಗಿತ್ತು. ಮದವೇರಿದ್ದ ಆನೆ ಕಾಡಾನೆಗಳ ಜತೆ ಕಾಳಗ ನಡೆಸಿತ್ತು ಎನ್ನಲಾಗಿದೆ. ಸೆ.19ರಂದು ಆನೆಯನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ಅರಿವಳಿಕೆ ಚುಚ್ಚುಮದ್ದು ನೀಡಿದ್ದು, ಜ್ಞಾನತಪ್ಪಿ ಎಚ್ಚರಗೊಂಡಿದ್ದ ಆನೆ ಅಸ್ವಸ್ಥಗೊಂಡು ಮೃತಪಟ್ಟಿದೆ.
ಎರಡು ತಿಂಗಳ ಹಿಂದೆ ಸಾವನ್ನಪ್ಪಿದ್ದ ಶೀರೂರು ಲಕ್ಷ್ಮೀವರ ತೀರ್ಥರಿಗೂ ಇದು ಅಚ್ಚುಮೆಚ್ಚಿನ ಆನೆಯಾಗಿತ್ತು. ಆನೆ ಸಾವಿನ ಸುತ್ತ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂಬ ಮಾತುಗಳು ಕೇಳಿಬಂದಿದೆ.
Comments are closed.