ಕರಾವಳಿ

ಅಪಘಾತ ಹಿನ್ನೆಲೆ  : ನಾಳೆ ನಡೆಯಲಿದ್ದ “ಶಬರಿಮಲೆ ಸತ್ಯಾನ್ವೇಷಣೆ” ಕಾರ್ಯಕ್ರಮ ರದ್ದು

Pinterest LinkedIn Tumblr

ಮಂಗಳೂರು, ಆಗಸ್ಟ್.10 : ಸಿಟಿಜನ್ ಕೌನ್ಸಿಲ್ ಮಂಗಳೂರು ಇದರ ಅಶ್ರಯದಲ್ಲಿ ಮಂಗಳೂರಿನ ಪ್ರತಾಪನಗರದಲ್ಲಿರುವ ಸಂಘನಿಕೇತನದಲ್ಲಿ ಅಗಸ್ಟ್ 11 (ನಾಳೆ) ಶನಿವಾರದಂದು ಸಂಜೆ ಆರು ಗಂಟೆಗೆ ಆಯೋಜಿಸಿದ್ದ “ಶಬರಿಮಲೆ ಸತ್ಯಾನ್ವೇಷಣೆ” ಸಂವಾದ ಕಾರ್ಯಕ್ರಮ ಅನಿವಾರ್ಯ ಕಾರಣಗಳಿಂದ ರದ್ದಾಗಿದೆ.

ಪ್ರಧಾನ ಭಾಷಣಕಾರರಾಗಿದ್ದ ರಾಹುಲ್ ಈಶ್ವರ್ ಅವರು ಅಪಘಾತದಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿರುವ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಸಾಧ್ಯವಾಗಿರುವುದರಿಂದ “ಶಬರಿಮಲೆ ಸತ್ಯಾನ್ವೇಷಣೆ” ಸಂವಾದವನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಸಿಟಿಜನ್ ಕೌನ್ಸಿಲ್ ಮಂಗಳೂರು ಘಟಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Comments are closed.