ಕರಾವಳಿ

ಬೆಂಗಳೂರು ಶ್ರೀ ಕಾಶೀ ಮಠ ಶ್ರೀಪಾರ್ಥಸಾರಥಿ ದೇವರ ಮೂಲ ಪ್ರತಿಷ್ಠಾ ವರ್ಧಂತಿ ಮಹೋತ್ಸವ

Pinterest LinkedIn Tumblr

ಮಂಗಳೂರು : ಬೆಂಗಳೂರು ಶ್ರೀ ಕಾಶೀ ಮಠ ಸಂಸ್ಥಾನದ ಶಾಖಾಮಠದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಪ್ರತಿಷ್ಟಾಪಿಸಲ್ಪಟ್ಟ ಶ್ರೀಪಾರ್ಥಸಾರಥಿ ದೇವರ ಮೂಲ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಶ್ರೀಸಂಸ್ಥಾನದ ಪೀಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನಿನ್ನೆ ಬೆಳಿಗ್ಗೆ ಶ್ರೀದೇವರಿಗೆ ಪಂಚಾಮೃತ, ಸಹಸ್ರ ಶಿಯಾಳಾಭೀಷೇಕ ಹಾಗೂ ಶತಕಲಶಾಭಿಷೇಕಗಳು ನೆರವೇರಿದವು.

ಸಾಯಂಕಾಲ ಗರುಡ ವಾಹನ ಸೇವೆ ಹಾಗೂ ಅಷ್ಟವಧಾನ ಸೇವೆ ನೆರವೇರಿದವು.

Comments are closed.