ಕರಾವಳಿ

ಅಭಯಚಂದ್ರ ಜೈನ್ ಪರ ಪ್ರಚಾರ: ನಾಳೆಯಿಂದ ಮಿಥುನ್ ರೈ ರೋಡ್ ಶೋ

Pinterest LinkedIn Tumblr

    ಮಿಥುನ್ ರೈ                                    ಅಭಯ್ ಚಂದ್ರ ಜೈನ್

ಮಂಗಳೂರು : ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ನಾಳೆಯಿಂದ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಅಭಯ್ ಚಂದ್ರ ಜೈನ್ ಅವರ ಪರ ರೋಡ್ ಶೋ ನಡೆಸಲಿದ್ದಾರೆ.

ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಿಥುನ್ ರೈ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ಮೌನಿಯಾಗಿದ್ದರು. ಆದರೆ ಇದೀಗ ಈ ಬಗ್ಗೆ ಯಾವೂದೇ ಮನಸ್ತಾಪ ತೋರದೆ ತಮಗೆ ಟಿಕೆಟ್ ನಿರಾಕರಿಸಿದ ಕ್ಷೇತ್ರದಲ್ಲೇ ಚುನಾವಣಾ ಪ್ರಚಾರದಲ್ಲಿ ತೊಡಗಲಿರುವರು.

ಮೂಲ್ಕಿ ಮೂಡಬಿದಿರೆಯಲ್ಲಿ ಮೂರು ದಿನಗಳ ಕಾಲ ವ್ಯಾಪಕ ಪ್ರಚಾರ :

ನಾಳೆಯಿಂದ ಮೂಲ್ಕಿ ಮೂಡಬಿದಿರೆಯಲ್ಲಿ ಕ್ಷೇತ್ರದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಅಭಯಚಂದ್ರ ಜೈನ್ ಅವರ ಪರವಾಗಿ ಮೂರು ದಿನಗಳ ಕಾಲ ವ್ಯಾಪಕ ಪ್ರಚಾರದಲ್ಲಿ ತೊಡಗಲಿದ್ದಾರೆ. ಈಗಾಗಲೇ ಜಿಲ್ಲೆಯಾದ್ಯಂತ ಪ್ರಚಾರ ನಡೆಸಿರುವ ಮಿಥುನ್ ರೈ ಅವರು ಸೋಮವಾರ ಬೆಳಿಗ್ಗೆ ಕಟೀಲು ಕ್ಷೇತ್ರದಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಟೀಲು ಮಾತೆಗೆ ಪೂಜೆ ಸಲ್ಲಿಸಿ ತಮ್ಮ ಪ್ರಚಾರ ನಡೆಸಲಿದ್ದಾರೆ.

ಕಟೀಲಿನಲ್ಲಿ ರೋಡ್ ಶೋ ನಡೆಸಿದ ಬಳಿಕ ಮೂಲ್ಕಿ, ಕಿನ್ನಿಗೋಳಿ ಮೊದಲಾದೆಡೆ ಪ್ರಚಾರ ನಡೆಸಲಿದ್ದಾರೆ. ಮೂರು ದಿನಗಳ ಕಾಲ ಕ್ಷೇತ್ರದಾದ್ಯಂತ ಪ್ರಚಾರ ನಡೆಸಲಿರುವ ಮಿಥುನ್ ರೈ ಅಭಯಚಂದ್ರ ಜೈನ್ ಪರ ಮತಯಾಚನೆ ನಡೆಸಲಿದ್ದಾರೆ.

Comments are closed.