ಉಡುಪಿ: ವಿಧಾನಸಭಾ ಚುನಾವಣೆ 2018 ಕ್ಕೆ ಸಂಬಂದಿಸಿದಂತೆ , ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದ 43 ಅಭ್ಯರ್ಥಿಗಳಲ್ಲಿ 4 ಮಂದಿಯ ನಾಮಪತ್ರಗಳು ತಿರಸ್ಕೃತಗೊಂಡಿದ್ದು, ವಿವರ ಕೆಳಗಿನಂತಿದೆ.
118ಬೈಂದೂರು- ಮದನ್ (ಕಾಂಗ್ರೆಸ್ ಪಕ್ಷ), 119 ಕುಂದಾಪುರ- ಕಿರಣ್ ಕುಮಾರ್ ಕೊಡ್ಗಿ,(ಬಿಜೆಪಿ)
122 ಕಾರ್ಕಳ – ಎಸ್.ಸತೀಶ್ ಸಾಲಿಯಾನ್ (ಬಿಎಸ್ಪಿ), ಸೈಯದ್ ಅರೀಫ್ (ಪಕ್ಷೇತರ). 120 ಉಡುಪಿ ಮತ್ತು 121 ಕಾಪು ಕ್ಷೇತ್ರದಲ್ಲಿ ಯಾವುದೇ ನಾಮಪತ್ರ ತಿರಸ್ಕೃತವಾಗಿರುವುದಿಲ್ಲ. ಪ್ರಸ್ತುತ ಒಟ್ಟು 39 ಮಂದಿ ಕಣದಲ್ಲಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ಏಪ್ರಿಲ್ 27 ಕೊನೆಯ ದಿನವಾಗಿದೆ.
Comments are closed.