ಮೂಡುಬಿದಿರೆ, ಎಪ್ರಿಲ್.4 : ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತೋಡಾರಿನ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಒಳ ರಸ್ತೆಯ ಬಳಿ ಮೂಡುಬಿದಿರೆ ಪೊಲೀಸರು ಬುಧವಾರ ಸಂಜೆ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಅಡ್ಡೂರಿನ ಸಿದ್ಧಿಕ್, ಅಲಂಗಾರಿನ ಕರುಣಾಕರ ಹಾಗೂ ಸಿನನ್ ಎಂದು ಹೆಸರಿಸಲಾಗಿದೆ.
ಆರೋಪಿ ಕರುಣಾಕರ ಅಲಂಗಾರು ಪರಿಸರದಲ್ಲಿ ಈ ಜಾನುವಾರುಗಳನ್ನು ತಂದು ಕಟ್ಟಿ ಹಾಕಿದ್ದು, ಅಲ್ಲಿಂದ ಅಕ್ರಮವಾಗಿ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಮೂಡುಬಿದಿರೆ ಠಾಣಾಧಿಕಾರಿ ದೇಜಪ್ಪ ಹಾಗೂ ಸಿಬ್ಬಂ ದಿ ತೋಡಾರು ಬಳಿ ವಾಹನವನ್ನು ತಡೆದು ನಿಲ್ಲಿಸಿ, ತಪಾಸಣೆ ನಡೆಸಿದಾಗ ಅಕ್ರಮ ಗೋ ಸಾಗಾಟ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.