ಕರಾವಳಿ

ಮುಲ್ಕಿ ಶ್ರೀ ವೆಂಕಟರಮಣ ದೇವರಿಗೆ ಸ್ವರ್ಣ ಗರುಡ ಸಮರ್ಪಣೆ

Pinterest LinkedIn Tumblr

ಮಂಗಳೂರು : ಒಳಲಂಕೆ ಖ್ಯಾತಿಯ ಮುಲ್ಕಿ ಶ್ರೀ ವೆಂಕಟರಮಣ ದೇವರಿಗೆ ನೂತನವಾಗಿ ನಿರ್ಮಿಸಲಾದ ಸ್ವರ್ಣ ಗರುಡ ವಾಹನದ ಸಮರ್ಪಣೆಯು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಸಮರ್ಪಿಸಲಾಯಿತು .

ಯುಗಾದಿ ಪ್ರಯುಕ್ತ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು ಪ್ರಾರಂಭದಲ್ಲಿ ಬೆಳಿಗ್ಗೆ ನವಕ ಪ್ರಧಾನ ಹೋಮ , ಪ್ರತಿಷ್ಠಾ ಹೋಮ , ಅಭಿಷೇಕ ಪೂಜಾದಿಗಳು ವೈದಿಕರಿಂದ ನಡೆದವು ಬಳಿಕ ಚೇ೦ಪಿ ಮೊಕ್ಕಾಂ ನಿಂದ ಆಗಮಿಸಿದ ಶ್ರೀಗಳವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು ಶ್ರೀದೇವರ ದರ್ಶನಬಳಿಕ ಪದ ಪೂಜೆ ತದನಂತರ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಲಕ್ಷ್ಮಿ ಪೂಜೆ , ಮುಹೂರ್ತ ನೀರೀಕ್ಷಣೆ ನಡೆದವು ನೂತನವಾಗಿ ನಿರ್ಮಿಸಲಾದ ಸ್ವರ್ಣ ಗರುಡ ವಾಹನ ಸಮರ್ಪಣೆ ನೆರೆದ ಸಾವಿರಾರು ಭಜಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಜತ ರಥೋತ್ಸವವು ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು . ಈ ಸಂಧರ್ಭದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿ ಪದಾಧಿಕಾರಿಗಳು , ಸ್ವರ್ಣ ಗರುಡ ನಿರ್ಮಾಣ ಸಮಿತಿಯ ಪದಾಧಿಕಾರಿಗಳು , ಸ್ವರ್ಣ ಗರುಡ ವಾಹನ ಸೇವಾ ಧಾರರಾದ ಮುಂಬೈ ಯಾ ಖ್ಯಾತ ಉದ್ಯಮಿ ರಘುನಂದನ್ ಕಾಮತ್ ಹಾಗೂ ಕುಟುಂಭಸ್ಥರು ಉಪಸ್ಥಿತರಿದ್ದರು .

ಚಾಂದ್ರಮಾನ ಯುಗಾದಿ ಪ್ರಯುಕ್ತ ವ್ಯಾಸ ದೇವರಿಗೆ ತೈಲಾಭಿಷೇಕ:

ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸ ರಘುಪತಿ ದೇವರಿಗೆ ಚಾಂದ್ರಮಾನ ಯುಗಾದಿ ಪ್ರಯುಕ್ತ ತೈಲಾಭಿಷೇಕ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಯವರ ದಿವ್ಯ ಹಸ್ತಗಳಿಂದ ನೆರವೇರಿತು ಹಾಗೂ ಶ್ರೀಗಳವರ ವಸಂತಮಾಸವು ಚೇ೦ಪಿ ಶ್ರೀ ಲಕ್ಷಿ ವೆಂಕಟರಮಣ ದೇವಳದಲ್ಲಿ ಪ್ರಾರಂಭವಾಯಿತು.

ಚಿತ್ರ : ಮಂಜು ನೀರೇಶ್ವಾಲ್ಯ

Comments are closed.