ಮಂಗಳೂರು, ಮಾರ್ಚ್.14: ದ.ಕ. ಜಿಲ್ಲೆಯ ಸಮುದ್ರ ಅಲೆಗಳ ಚಲನವಲನದ ಮೇಲೆ ಹಾಗೂ ಕಡಲ ಕಿನಾರೆಯಲ್ಲಾಗುವ ಪ್ರಕ್ಷುಬ್ಧದ ಬಗ್ಗೆ ನಿಗಾ ವಹಿಸಲು ಜಿಲಾಡಳಿತ ಸೂಚಿಸಿದೆ
ಕೇರಳದಲ್ಲಿ ಸಮುದ್ರ ಅಲೆಗಳ ಅಬ್ಬರದ ಹಿನ್ನೆಲೆಯಲ್ಲಿ ಸಂಭಾವ್ಯ ಅಪಾಯವನ್ನು ತಪ್ಪಿಸುವ ಸಲುವಾಗಿ ದ.ಕ.ಜಿಲ್ಲೆಯಲ್ಲೂ ಮುನ್ನೆಚ್ಚರಿಕೆ ವಹಿಸುವಾಂತೆ ದ.ಕ.ಜಿಲ್ಲಾಡಳಿತ ಈ ಸೂಚನೆ ನೀಡಿದೆ.
ಉಳ್ಳಾಲ, ಸೋಮೇಶ್ವರ, ಪಣಂಬೂರು, ಸಸಿಹಿತ್ಲು ಮತ್ತಿತರ ಕಡೆ ಸಮುದ್ರ ಅಲೆಗಳು ಸಾಮಾನ್ಯ ಸ್ಥಿತಿಯಲ್ಲಿದ್ದು, ಹವಾಮಾನ ಇಲಾಖೆಯ ಸೂಚನೆಯ ಮೇರೆಗೆ ಜಿಲ್ಲಾ ವಿಪತ್ತು ನಿರ್ವಹಣೆ ತಂಡವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತಿವೆ.
ಮೀನುಗಾರಿಕೆಗೆ ತೆರಳಿರುವ ಎಲ್ಲಾ ಬೋಟುಗಳನ್ನು ಹಿಂದಿರುಗಲು ಸೂಚನೆ ನೀಡಿರುವ ಜಿಲ್ಲಾಡಳಿತ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಿದೆ.
Comments are closed.