ಉಡುಪಿ: ಭಷ್ಟಚಾರ ನಿಗ್ರಹ ದಳ ತಂಡ , ಭ್ರಷ್ಟ ಅಧಿಕಾರಿ ಉಡುಪಿ ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಕೆ ವಿನೋದ್ ಕುಮಾರ್ ಹಾಗೂ ಆತನ ಚಾಲಕನ ವಸತಿ ಗೃಹದ ಮೇಲೂ ದಾಳಿ ನಡಸಿ ಪರಿಸೀಲನೆಗಳನ್ನ ನಡೆಸಿದೆ.
ಚಿಕ್ಕ ಮಂಗಳೂರಿನ ಪ್ರಭಾರ ಡಿವೈಎಸ್ಪಿ ಬ್ರಿಜೆಶ್ ಮ್ಯಾಥೂ ನೇತೃತ್ವದಲ್ಲಿ ಉಡುಪಿಯ ಅಬಕಾರಿ ಕಚೇರಿಗೆ ದಾಳಿ ನಡೆಸಿ ಹಲವು ದಾಖಲೆಗಳ ಪರಿಶೀಲನೆ ನಡೆಸಿದೆ. ಕಚೇರಿಯಲ್ಲಿರುವ ಕಂಪ್ಯೂಟರ್ ಅಪರೇಟರ್ ಗಳು ಸೇರಿದಂತೆ ಎಲ್ಲಾ ಸಿಂಬದಿಗಳ ವಿಚಾರಣೆ ನಡೆಸಿದೆ.
ಇನ್ನೂ ವಿನೋದ್ ಕುಮಾರ್ ಚಾಲಕನಾಗಿರುವ ದಿನೇಶ್ ತಂಗಿರುವ ವಸತಿ ಗೃಹಕ್ಕೆ ಕೂಡ ದಾಳಿ ನಡೆಸಿದ್ದಾರೆ.
ಸುಮಾರು ನಾಲ್ಕುವರೆ ವರ್ಷಗಳಿಂದ ಉಡುಪಿಯಲ್ಲಿ ಕರ್ತವ್ಯದಲ್ಲಿರುವ ಅಬಕಾರಿ ಅಧಿಕಾರಿ ವಿನೋದ್ ಕುಮಾರ್ ವಿರುದ್ದ, ಉಡುಪಿ ಎಸಿಬಿಗೆ ಹಲವು ದೂರುಗಳ ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎಂದು ಎಸಿಬಿ ಆಧಿಕಾರಿಗಳು ತಿಳಿಸಿದ್ದಾರೆ.
Comments are closed.