ಕರಾವಳಿ

ಉಪೇಂದ್ರ ಬಿಜೆಪಿಗೆ ಬರೋ ಬಗ್ಗೆ ಸಂಸದೆ ಶೋಭಾ ಹೇಳಿದ್ದೇನು?

Pinterest LinkedIn Tumblr

ಉಡುಪಿ: ನಟ ಉಪೇಂದ್ರ ಬಿ.ಜೆ‌.ಪಿ ಪಕ್ಷ ಸೇರ್ಪಡೆ ವಿಚಾರವಾಗಿ ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

ಬಿ.ಜೆ.ಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು ಇದೊಂದು ಸಮುದ್ರವಿದ್ದಂತೆ. ಈ ಸಮುದ್ರಕ್ಕೆ ಯಾವುದೇ ನೀರು ಹರಿದು ಬಂದ್ರು ಸ್ವೀಕಾರ ಮಾಡುತ್ತೆ. ಕರ್ನಾಟಕ ರಾಜ್ಯ ಚುನಾವಣೆ ಹತ್ತಿರ ಬರ್ತಾ ಇದೆ. ರಾಜ್ಯದ ಯಾವುದೇ ಕಲಾವಿದರು,ಮುಖಂಡರು ಕ್ರಿಮಿನಲ್ ಹಿನ್ನಲೆ ಇಲ್ಲದೆ ಇರುವವರನ್ನು ಬಿ.ಜೆ‌ಪಿ ಸ್ವಾಗತಿಸುತ್ತೆ. ಉಪೇಂದ್ರ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದ್ದಾರೆ. ಪಕ್ಷ ಮುಂದುವರಿಸುತ್ತಾರೋ, ಬಿ.ಜೆ‌.ಪಿ ಜೊತೆ ಮರ್ಜ್ ಮಾಡುತ್ತಾರೋ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ.

ಕೃಷ್ಣ ಮಠಕ್ಕೆ ಬರ್ತಿರಾ ಸಿದ್ದರಾಮಯ್ಯ?
ಚುನಾವಣೆ ಬಂದ್ರೆ ರಾಹುಲ್ ಗಾಂಧಿ ದೇವಸ್ಥಾನ ಸುತ್ತುತ್ತಾರೆ. ಇದರಿಂದ ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳ ಕ್ಕೆ ಹೋಗ್ತಾರೆ. ಇದರಿಂದ ಶುದ್ದವಾಗಿರಬೇಕು ಅನ್ನೋ ನಂಬಿಕೆಗೆ ಧಕ್ಕೆಯಾಗಿದೆ. ಸಿಎಂ ಗೋಮಾಂಸ ತಿಂತೇನೆ ಅಂತಾರೆ. ಈಗ ದೇವಸ್ಥಾನಕ್ಕೆ ಹೋಗ್ತಿರಾ? ಇಳಿವಯಸ್ಸಿನ ಪೇಜಾವರ ಸ್ವಾಮೀಜಿ ಹೇಳಿದ್ರೂ ಮಠಕ್ಕೆ ಬರ್ಲಿಲ್ಲ. ಕನಕನಿಗೆ ಒಲಿದ ಕೃಷ್ಣನ ದರ್ಶನ‌ ಮಾಡಿಲ್ಲ. ರಾಹುಲ್ ಗಾಂಧಿ ಬಂದಾಗ ಕೃಷ್ಣ ಮಠಕ್ಕೆ ಬರ್ತಿರಾ ಸಿದ್ದರಾಮಯ್ಯ?? ಇವರು ಚುನಾವಣೆ ಕಾರಣಕ್ಕೆ ಬರೋದು ಹೊರತು ಭಕ್ತಿಯಿಂದಲ್ಲ. ಕೃಷ್ಣಮಠವನ್ನು ವಶಪಡಿಸುವ ಷಡ್ಯಂತ್ರ ಮಾಡಿದ್ದೀರಿ, ನಿಮ್ಮನ್ನು ಜನ ಕ್ಷಮಿಸಲ್ಲ ಎಂದಿದ್ದಾರೆ.

Comments are closed.