ಕರಾವಳಿ

ಮೂಡುಬೆಳ್ಳೆ-ಬೆಂಗಳೂರು ಬಸ್ ಪಲ್ಟಿ: ಮಹಿಳೆ ಸಾವು, 8 ಮಂದಿಗೆ ಗಾಯ

Pinterest LinkedIn Tumblr

ಉಡುಪಿ: ಶಿರ್ವ ಕಾರ್ಕಳ ಮಾರ್ಗವಾಗಿ ಮೂಡುಬೆಳ್ಳೆಯಿಂದ ಬೆಂಗಳೂರಿಗೆ ಹೊರಟ ಖಾಸಗಿ ಬಸ್ಸು ಮೂಡಿಗೆರೆ ತಾಲೂಕು ಗೋಣಿಬೀಡು ಎಂಬಲ್ಲಿನ ತಿರುವಿನಲ್ಲಿ ಪಲ್ಟಿಯಾದ ಘಟನೆ ನಡೆದಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದು 8 ಮಂದಿಗೆ ಗಂಭೀರ ಗಾಯಗಳಾಗಿದೆ.

ಶಿರ್ವ ಸಮೀಪದ ಕುತ್ಯಾರು ಕರ್ಮಾರುಜಿಡ್ಡು ನಿವಾಸಿ ಭವ್ಯಾ (25) ಅಪಘಾತದಲ್ಲಿ ಸಾವನ್ನಪ್ಪಿದವರು. ಇವರ ಪತಿ ಸಂದೀಪ್ ಅವರಿಗೆ ಗಾಯಗಳಾಗಿದೆ.

ಕಾರ್ಕಳದ ಇನ್ನಾ ಮೂಲದ ಭವ್ಯಾ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದು ಅವರ ಪತಿ ಸಂದೀಪ್ ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಇತ್ತೀಚೆಗೆ ಊರಿಗೆ ಆಗಮಿಸಿದ್ದ ಅವರು ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಘೊಂಡು ಬೆಂಗಳುರಿಗೆ ಪುನಃ ತೆರಳುವಾಗ ಸಂಭವಿಸಿದ ಅಪಘಾತದಲ್ಲಿ ಈ ದುರ್ಘಟನೆ ನಡೆದಿದೆ.

Comments are closed.