ಕರಾವಳಿ

ದೀಪಕ್ ರಾವ್ ಕೊಲೆ ಪ್ರಕರಣ : ಮತ್ತೆ ಆರು ಮಂದಿ ಸೆರೆ – ಬಂಧಿತರ ಸಂಖ್ಯೆ 10ಕ್ಕೇರಿಕೆ

Pinterest LinkedIn Tumblr

ಮಂಗಳೂರು, ಜನವರಿ.24: ಮಂಗಳೂರಿನ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಜನವರಿ 3ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾಲ್ಕು ಮಂದಿಯನ್ನು ಬಂಧಿಸಲಾಗಿದ್ದು, ಇದೀಗ ಬಂಧಿತ ಆರೋಪಿಗಳೊಂದಿಗೆ ಕೊಲೆಗೆ ಸಂಚು ರೂಪಿಸಿ, ಕೃತ್ಯಕ್ಕೆ ಸಹಾಯ ಮಾಡಿರುವ ಆರೋಪದಲ್ಲಿ ಮತ್ತೆ 6 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ.

ದೀಪಕ್ ರಾವ್

ಬುಧವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಅವರು, ಚೊಕ್ಕಬೆಟ್ಟುವಿನ ಮುಹಮ್ಮದ್ ರಫೀಕ್ ಯಾನೆ ಮಾಂಗೋ ರಫೀಕ್, ಇರ್ಫಾನ್, ಇಮ್ರಾನ್ ನವಾಝ್, ಕಾಟಿಪಳ್ಳದ ಮುಹಮ್ಮದ್ ಅನಾಸ್ ಯಾನೆ ಅಂಚು, ಮುಹಮ್ಮದ್ ಝಾಹೀದ್ ಯಾನೆ ಜಾಹೀ ಹಾಗೂ ಹಿದಾಯಿತುಲ್ಲಾ ಎಂಬವರನ್ನು ಸಂಚು ಹಾಗೂ ಕೃತ್ಯಕ್ಕೆ ನೆರವು ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಹೇಳಿದರು.

ಒಳಸಂಚು ಹಾಗೂ ನೆರವು ನೀಡಿದ ಆರೋಪದಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ವಿರುದ್ಧ ಈಗಾಗಲೇ ಇತರ ಪ್ರಕರಣಗಳು ದಾಖಲಾಗಿವೆ.

1. ಮೊಹಮ್ಮದ್ ರಫೀಕ್ @ ಮಾಂಗೋ ರಪೀಕ್, 24 ವಷಱ, ತಂದೆ: ಮೊಹಮ್ಮದ್ ಇಸ್ಮಾಯಿಲ್, ವಾಸ: ಸಫ್ವಾನ್ ಮಂಜಿಲ್, 8 ನೇ ಬ್ಲಾಕ್, ಚೊಕ್ಕಬೆಟ್ಟು, ಸಣ್ಣ ಮಸೀದಿಯ ಬಳಿ, ಕಾಟಿಪಾಳ್ಳ, ಮಂಗಳೂರು
ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು ದಾಖಲಾಗಿರುತ್ತದೆ.

2. ಇರ್ಫಾನ್, ತಂದೆ: ಅಬ್ದುಲ್ ರೆಹಮಾನ್, ವಾಸ: ಸೈಟ್ ನಂಬ್ರ 54, 8 ನೇ ಬ್ಲಾಕ್, ಚೊಕ್ಕಬೆಟ್ಟು, ಕಾಟಿಪಾಳ್ಳ, ಮಂಗಳೂರು
ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಯತ್ನ ಪ್ರಕರಣ ದಾಖಲಾಗಿರುತ್ತದೆ.

3. ಮೊಹಮ್ಮದ್ ಆನಸ್, ತಂದೆ: ಅಹಮ್ಮದ್ ಹುಸೈನ್ ಭಾವ, ವಾಸ: 2 ನೇ ಬ್ಲಾಕ್, ಕಾಟಿಪಾಳ್ಳ, ಸುರತ್ಕಲ್, ಮಂಗಳೂರು
ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಯತ್ನ ಪ್ರಕರಣ ಮತ್ತು ಒಂದು ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ಮತ್ತು ಮಂ.ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.

4. ಮಹಮ್ಮದ್ ಜಾಹೀದ್, ತಂದೆ: ಹಸನಬ್ಬ, ವಾಸ: ಶಹಂ ಮಂಜಿಲ್, 6 ನೇ ಬ್ಲಾಕ್, ಕಾಟಿಪಾಳ್ಳ, ಸುರತ್ಕಲ್, ಮಂಗಳೂರು
ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು, ಒಂದು ಕಳವು ಪ್ರಕರಣ ಮತ್ತು ಒಂದು ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ಮತ್ತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿರುತ್ತದೆ.

5. ಹಿದಾಯಿತುಲ್ಲಾ, ತಂದೆ: ಎಸ್ ಹುಸೈನ್, ವಾಸ: 7 ನೇ ಬ್ಲಾಕ್, ಕಾಟಿಪಾಳ್ಳ, ಸುರತ್ಕಲ್, ಮಂಗಳೂರು
ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಅತ್ಯಾಚಾರ ಪ್ರಕರಣ ದಾಖಲಾಗಿರುತ್ತದೆ.

6. ಇಮ್ರಾನ್ ನವಾಜ್, ತಂದೆ: ಟಿ.ಯೂಸೆಫ್, ವಾಸ: ಚೊಕ್ಕಬೆಟ್ಟು, ಸೈಟ್ ನಂಬ್ರ 149, ಸುರತ್ಕಲ್, ಮಂಗಳೂರು
ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಹಲ್ಲೆ ಪ್ರಕರಣ ದಾಖಲಾಗಿರುತ್ತದೆ ಎಂದು ಕಮಿಷನರ್ ವಿವರಿಸಿದರು.

ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳಾದ ಮುಹಮ್ಮದ್ ನೌಷಾದ್, ಮುಹಮ್ಮದ್ ಇರ್ಷಾನ್ ಯಾನೆ ಇರ್ಶಾ, ಅಬ್ದುಲ್ ಅಝೀಝ್ ಯಾನೆ ಅಝೀಝ್, ಅಬ್ದುಲ್ ಅಝೀಮ್ ಯಾನೆ ಅಝೀಮ್ ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

Comments are closed.