ಕರಾವಳಿ

ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಭೇರಿ : ಮಂಗಳೂರಿನಲ್ಲಿ ವಿಜಯೋತ್ಸವ

Pinterest LinkedIn Tumblr

ಮಂಗಳೂರು, ಡಿಸೆಂಬರ್. 18 : ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳೂರಿನಲ್ಲಿ ವಿಜಯೋತ್ಸವ ಆಚರಿಸಿದರು.

ಪಕ್ಷದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ನಗರದ ಕೊಡಿಯಾಲ್ ಬೈಲ್‌ನ ಪಿವಿಎಸ್ ಸಮೀಪದ ಪಕ್ಷದ ಕಚೇರಿ ಮುಂಭಾಗ ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮ ಆಚರಿಸಿದರು.

ಇದೇ ವೇಳೆ ಬಿಜೆಪಿ ಮುಖಂಡರ ನೇತ್ರತ್ವದಲ್ಲಿ ಪಿವಿಎಸ್ ವೃತ್ತದಿಂದ ನವಭಾರತ ವೃತ್ತದವರೆಗೆ ವಿಜಯೋತ್ಸವ ಮೆರವಣಿ ಹಮ್ಮಿಕೊಂಡರು. ಈ ವೇಳೆ ಬಿಜೆಪಿ ಮುಖಂಡರು ನೃತ್ಯ ಮಾಡುತ್ತ ಮೆರವಣಿಯಲ್ಲಿ ಸಾಗಿದರು.

ಸಂಸದ ನಳೀನ್ ಕುಮಾರ್ ಕಟೀಲ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ರಾಜ್ಯ ಮುಖಂಡ ಎಸ್.ಬದ್ರಿನಾಥ್ ಕಾಮಾತ್, ದ.ಕ. ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ವೇದವ್ಯಾಸ ಕಾಮಾತ್, ಪ್ರಮುಖರಾದ ಸತೀಶ್ ಪ್ರಭು, ಸಂಜಯ್ ಪ್ರಭು, ಮನಪಾ ಸದಸ್ಯರಾದ ರೂಪಾ.ಡಿ ಬಂಗೇರಾ, ಪೂರ್ಣಿಮಾ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

Comments are closed.