ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆರೋಪಿಗಳ ವಿಚಾರಣೆ ದಿನಾಂಕವನ್ನು ಡಿಸೆಂಬರ್ 23 ಕ್ಕೆ ನಿಗದಿ ಪಡಿಸಿ ಉಡುಪಿ ಜಿಲ್ಲಾ ಸತ್ರ ನ್ಯಾಯಲಯವು ಆದೇಶ ನೀಡಿದೆ.
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿಗಳಾದ ರಾಜೇಶ್ವರಿ, ನಿರಂಜನ್ ಭಟ್ ಹಾಗೂ ನವನೀತ್ ಶೆಟ್ಟಿ ಜೊತೆ ವಿಡಿಯೋ ಕಾನ್ಪೆರೆನ್ಸ್ ಮೂಲಕ ಆದೇಶ ನೀಡಿದ ಜಿಲ್ಲಾ ಸತ್ರ ನ್ಯಾಯಲಯ ನ್ಯಾಯಧೀಶ ವೆಂಕಟೇಶ್ ನಾಯಕ್ ಅವರು ವಿಚಾರಣೆ ಮುಂದುಡಿದ್ದಾರೆ. ಅಕ್ಟೊಬರ್ 23 ರಂದು ಅರೋಪಿಗಳು ತಮ್ಮ ಮೇಲಿರುವ ದೋಷಾರೋಪವನ್ನು ನಿರಾಕರಿಸಿದ್ದರು.
ಸಿ.ಓ.ಡಿ ಇನ್ನೂ ತನಿಖೆ ಪೂರ್ಣಗೊಳಿಸದೆ ಹೆಚ್ಚುವರಿ ಆರೋಪ ಪಟ್ಟಿಯನ್ನು ಸಲ್ಲಿಸಿಲ್ಲ ಹೀಗಾಗಿ ವಾದ ಮಂಡಿಸಲು ಅಸಾದ್ಯ. ಅಷ್ಟೇ ಅಲ್ಲದೇ ತನಿಖೆ ಪೂರ್ಣಗೊಳ್ಳದ ಕಾರಣ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟಿನಲ್ಲಿ ಕೊಲೆಯ ಪ್ರಮುಖ ಅರೋಪಿ ರಾಜೇಶ್ವರಿಗೆ ಜಾಮೀನು ಸಿಗದ ಹಿನ್ನಲೆಯಲ್ಲಿ ನ್ಯಾಯಾಲಯ ವಿಚಾರಣೆ ದಿನಾಂಕ ನಿಗದಿಪಡಿಸಿರುವುದಕ್ಕೆ ಆರೋಪಿ ಪರ ವಕೀಲರಿಂದ ಅಕ್ಷೇಪ ವ್ಯಕ್ತವಾಗಿದೆ.
Comments are closed.