ಕರಾವಳಿ

ತೊಕ್ಕೊಟ್ಟು ಸಮೀಪ ಬೈಕ್‌ಗೆ ಬಸ್ ಢಿಕ್ಕಿ : ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

Pinterest LinkedIn Tumblr

ತೊಕ್ಕೊಟ್ಟು / ಕಲ್ಲಾಪು, ನವೆಂಬರ್. 5: ಉಳ್ಳಾಲ- ತೊಕ್ಕೊಟ್ಟು ಸಮೀಪ ಬಾನುವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ತುಂಬೆ ಕಾಲೇಜಿನ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಉಳ್ಳಾಲ್ ಬೈಲ್ ನಿವಾಸಿ ತುಂಬೆ ಬಿಎ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಸಯ್ಯದ್ ಶಲೀಲ್ ಎಂದು ಗುರುತಿಸಲಾಗಿದೆ.

ಮಹಮ್ಮದ್ ಸಯ್ಯದ್ ಶಲೀಲ್ ಅನ್ನ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಸಂದರ್ಭ ಈತನ ವಾಹನಕ್ಕೆ ಬಸ್ಸೊಂದು ಢಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಮಹಮ್ಮದ್ ಸಯ್ಯದ್ ಶಲೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಜನರು ಅಪಘಾತಕ್ಕೆ ರಸ್ತೆಯ ಅವ್ಯವಸ್ತೆಯೇ ಕಾರಣ ಎಂದು ಅಕ್ರೋಷ ವ್ಯಕ್ತಪಡಿಸಿದ್ದರು. ಕಳಪೆ ಕಾಮಗಾರಿಯ ರಸ್ತೆಯ ಅವ್ಯವಸ್ತೆಯಿಂದ ಈ ರಸ್ತೆಯಲ್ಲಿ ದಿನನಿತ್ಯ ಅಪಘಾತಗಳು ತಪ್ಪಿದ್ದಲ್ಲ. ನಿನ್ನೆ ತಾನೆ ಇಲ್ಲಿಂದ ಕೆಲೆವೇ ಮೀಟರ್ ದೂರದಲ್ಲಿ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಈ ಅಪಘಾತಕ್ಕೆ ರಸ್ತೆಯ ಅವ್ಯವಸ್ತೆಯೇ ಕಾರಣ ಎಂದು ಅಲ್ಲಿ ಸೇರಿದ್ದ ನಾಗರೀಕರು ಅಕ್ರೋಷ ವ್ಯಕ್ತಪಡಿಸಿದರು.

Comments are closed.