ಕರಾವಳಿ

ಗಾಂಜಾ ಸೇವನೆ: ಉಡುಪಿ ಡಿಸಿಐಬಿ ಪೊಲೀಸರಿಂದ ಯುವಕನ ಬಂಧನ

Pinterest LinkedIn Tumblr

ಉಡುಪಿ: ರಿಕ್ಷಾ ನಿಲ್ದಾಣದ ಸಮೀಪ ಗಾಂಜಾ ಸೇವಿಸುತ್ತಿದ್ದ ಯುವಕನೋರ್ವನನ್ನು ಡಿಸಿಐಬಿ ಪೊಲೀಸರು ಬಂಧಿಸಿದ ಘಟನೆ ರಾಜೀವನಗರ ರಿಕ್ಷಾ ನಿಲ್ದಾಣದ ಬಳಿ ನಡೆದಿದೆ.

ಉಡುಪಿ ಅಲೆವೂರು ಗ್ರಾಮದ ನಿವಾಸಿ ಅಜಿತ್‌‌@ಸುಬ್ಬು(23) ಬಂಧಿತ ಆರೋಪಿ.

ಉಡುಪಿ ಡಿ.ಸಿ.ಐ.ಬಿ ನಿರೀಕ್ಷಕ ಸಂಪತ್‌‌ ಕುಮಾರ್‌ ಅವರಿಗೆ ರಾಜೀವನಗರ ರಿಕ್ಷಾ ನಿಲ್ದಾಣದ ಬಳಿ ಅಜಿತ್‌ ಎಂಬಾತ ಗಾಂಜಾ ಸೇವಿಸುತ್ತಿರುವುದಾಗಿ ಬಂದ ಮಾಹಿತಿಯಂತೆ ಆತನನ್ನು ವಶಕ್ಕೆ ತೆಗೆದುಕೊಂಡು ಪರಿಶೀಲಿಸಿದಾಗ ಆತನು ಗಾಂಜಾ ಸೇವನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಕೆ.ಎಮ್‌‌.ಸಿ ಆಸ್ಪತ್ರೆ ಮಣಿಪಾಲದಲ್ಲಿ ವೈದ್ಯಕೀಯ ತಪಾಸಣೆ ಮಾಡಿದಾಗ ಆತನು ಮಾದಕ ವಸ್ತುವಾದ ಗಾಂಜಾವನ್ನು ಸೇವನೆ ಮಾಡಿದ್ದು ಧೃಢಪಟ್ಟಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಸಾಂದರ್ಭಿಕ ಚಿತ್ರ)

Comments are closed.