
ಉಡುಪಿ: ನಾವು ಇಷ್ಟರವರೆಗೆ ಹಿಂದೂಗಳಾಗಿಯೇ ಇರಲಿಲ್ಲ ಅಂತ ನಿವ್ರತ್ತ ಅಧಿಕಾರಿ ಜಾಮ್ದಾರ್ ಹೇಳಿಕೆಯನ್ನು ನೀಡಿದ್ದು ಇದರ ಬಗ್ಗೆ ಪ್ರತಿಕ್ರಿಯಿಸಿರುವ ಪೇಜಾವರ ಶ್ರೀ್ ಜಾಮ್ದಾರ್ ಅವರ ಹೇಳಿಕೆ ಸರಿಯಲ್ಲ. ಎಲ್ಲಾ ಹಿಂದೂ ಸಮಾವೇಶದಲ್ಲಿ, ವಿಹಿಂಪ ಕಾರ್ಯಕ್ರಮದಲ್ಲಿ ಲಿಂಗಾಯತರು, ವಿರಕ್ತಿ ಮಠಾಧೀಶರು ಪಾಲ್ಗೊಂಡಿದ್ದಾರೆ.ಉಡುಪಿಯಲ್ಲಿ 1968 ರಲ್ಲಿ ವಿಹಿಂಪ ಪ್ರಾಂತೀಯ ಸಮಾವೇಶ ನಡೆದಿತ್ತು.ಸಮಾವೇಶದಲ್ಲಿ ಸಿದ್ದಗಂಗಾಶ್ರೀ, ಆಗಿನ ಸುತ್ತೂರುಶ್ರೀ ಭಾಗವಹಿಸಿದ್ದರು
ಜಾಮ್ದಾರ್ ಹೇಳಿಕೆಯಲ್ಲಿ ಸತ್ಯ ಇಲ್ಲ ,ಹಿಂದೂ ಹೋರಾಟದಲ್ಲಿ ನಿಮ್ಮದು ಪ್ರಥಮ ಧ್ವನಿ ಅಂತ ಈವರೆಗೆ ಎಲ್ಲಾ ಮಠಾಧೀಶರು ಹೇಳಿದ್ದಾರೆ
ಈಗ ಮಾತ್ರ ಹೊಸದಾಗಿ ವಿವಾದ ಪ್ರಾರಂಭವಾಗಿದೆ ಎಂದರು.ಬೌದ್ಧ- ಜೈನ ಧರ್ಮ ಪ್ರತ್ಯೇಕವಾದ ಕಾಲದಲ್ಲಿ ನಾನು ಇರಲಿಲ್ಲ. ಬಸವಣ್ಣ ಕೂಡಾ ಶಿವನೇ ಸರ್ವೋತ್ತಮ ಅಂತ ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ಹಲವು ಪಂಥಗಳಿಗೆ ತತ್ವ, ಆಚರಣೆ ವಿಭಿನ್ನವಾದ್ರೂ ಹಿಂದೂ ಧರ್ಮದೊಳಗೆ ಎಲ್ಲರೂ ಇದ್ದಾರೆ. ಬಸವಣ್ಣ ಪುನರ್ಜನ್ಮವನ್ನು ಒಪ್ಪಿದ್ದಾರೆ. ಅಪರಾಧ ಮಾಡಿದರೆ ನಾಯಿ- ಹಂದಿಯಾಗಿ ಹುಟ್ಟುತ್ತಾರೆಂದು ಶರಣರ ವಚನದಲ್ಲಿದೆ. ಶಿವ ಸರ್ವೋತ್ತಮ ಎನ್ನಲು ಬಸವಣ್ಣ ಆಗಮವನ್ನು ಉಲ್ಲೇಖಿಸಿದ್ದಾರೆ- ಉದಾಹರಿಸಿದ್ದಾರೆ. ನಮ್ಮ ಶಿವ ಅವೈದಿಕ ಅನ್ನಲು ಆಧಾರವೇನು?ಸುಮ್ಮನೆ ಏನೋ ಹೇಳಿದಲ್ಲ.
ಜಾಮ್ದಾರರು ಹೇಳದ್ದೆಲ್ಲ ಸತ್ಯಕ್ಕೆ ವಿರುದ್ಧ. ಲಿಂಗಾಯಿತರ ಮೇಲೆ ಪ್ರೀತಿಯಿಂದ ಇಷ್ಟೆಲ್ಲಾ ಹೇಳುತ್ತಿದ್ದೇನೆ. ಹಿಂದೂ ಧರ್ಮ ದುರ್ಬಲವಾಗಬಾರದು.
ಕರ್ನಾಟಕದಲ್ಲಿ ಹಿಂದೂ ಧರ್ಮ ಉತ್ತಮ ರೀತಿಯಲ್ಲಿ ಬೆಂಬಲಿಸಿಕೊಂಡು ಬಂದಿದ್ದಾರೆ. ವೈಯಕ್ತಿಕ ಸ್ವಾರ್ಥ ಇಲ್ಲ,ನಾನೇನು ಚುನಾವಣೆಗೆ ನಿಲ್ಲುವುದಿಲ್ಲ ,ಈ ಬಗ್ಗೆ ಉಡುಪಿಯಲ್ಲಿ ಚರ್ಚೆಯಾಗಲಿ .ಜನವರಿ 18 ರ ನಂತರ ಬೆಂಗಳೂರಿನಲ್ಲಿ ಚರ್ಚೆಯಾಗಲಿ ನಾನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಗೆ ಬರಲು ಸಿದ್ಧ ಎಂದು ಪೇಜಾವರ ಶ್ರೀಗಳು ಹೇಳಿದರು.
Comments are closed.