ಕರಾವಳಿ

ಮಟ್ಕಾ ಕಿಂಗ್‌ಫಿನ್ ಲಿಯೋ ಮಾಹಿತಿ ನೀಡಿದರೇ ನಗದು ಬಹುಮಾನ; SP ಸಂಜೀವ್ ಪಾಟೀಲ್

Pinterest LinkedIn Tumblr

ಉಡುಪಿ: ತಾನು ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಯಲ್ಲಿ ಮಟ್ಕಾ ದಂಧೆಗೆ ಕಡಿವಾಣ ಹಾಉವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಈಗಾಗಲೇ ಹಲವಾರು ಪ್ರಕರಣಗಳು ದಾಖಲಿಸಲಾಗಿದೆ. ಮಟ್ಕಾ ದಂಧೆಯ ಕಿಂಗ್‌ಫಿನ್ ಉಡುಪಿ ಮೂಲದ ಲಿಯೋ ಕರ್ನೆಲಿಯೊ ಎಂಬಾತನೇ ಇದಕ್ಕೆ ರುವಾರಿಯೆಂದು ತಿಳಿದಿದೆ. ಸದ್ಯ ಆತ ಪೋಲಿಸರಿಂದ ತಲೆಮರೆಸಿಕೊಂಡಿದ್ದು ಆತನ ಇರುವಿಕೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಲ್ಲಿ ನಗದು ಬಹುಮಾನವನ್ನು ಜಿಲ್ಲಾ ಪೋಲಿಸ್ ವತಿಯಿಂದ ನೀಡಲಾಗುವುದು ಮತ್ತು ಅವರುಗಳ ಹೆಸರನ್ನು ಗೌಪ್ಯವಾಗಿಡುತ್ತೇವೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಹೇಳಿದ್ದಾರೆ.

ಅವರು ಶನಿವಾರ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಈಗಾಗಲೇ ಮೂರು ತಿಂಗಳ ಅವಧಿಯಲ್ಲಿ 131 ಮಟ್ಕಾ ಸಂಬಂಧಿತ ಪ್ರಕರಣಗಳನ್ನು ಪತ್ತೆ ಹಚ್ಚಿದ್ದು 142 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

ನಾಗರಿಕರು ತಮ್ಮ ಸುತ್ತಮುತ್ತ ವಿದೇಶದಲ್ಲಿ ಉದ್ಯೋಗ ಕೊಡಿಸುವ ಏಜೆಂಟರು ಅಥನಾ ಸಂಸ್ಥೆಗಳಿದ್ದಲ್ಲಿ ಅವರು ಸರ್ಕಾರದ ವಿದೇಶಾಂಗ ವ್ಯವಹಾರ ಇಲಾಖೆಯಲ್ಲಿ ನೋಂದಾಯಿತರಾಗಿದ್ದಾರೋ ಇಲ್ಲವೋ ಎಂಬ ಬಗ್ಗೆ ಖಾತರಿಪಡಿಸಿಕೊಳ್ಳಬೇಕು, ನೊಂದಾಯಿತರಾಗದೇ ವ್ಯವಹರಿಸುತ್ತಿದ್ದಲ್ಲಿ ಅದು ಅಪರಾಧವಾಗಿದ್ದು, ಈ ಬಗ್ಗೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಲಹೆ ಮಾಡಿದರು.

ಸೌದಿ ಅರೇಬಿಯಾ ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ರಾಜ್ಯ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದು, ನೋಂದಾಯಿತರಲ್ಲದ ಏಜೆಂಟರ ಮೂಲಕ ಸೌದಿಯಲ್ಲಿ ಉದ್ಯೋಗ ಪಡೆದುಕೊಂಡು ಮೋಸ ಹೋಗುತ್ತಿರುವವರ ಬಗ್ಗೆ ಎಚ್ಚರಿಕೆ ನೀಡಿದ್ದು, ಇದರಿಂದ ಸೌದಿ ಅರೇಬಿಯಾಕ್ಕೂ ಮತ್ತು ಭಾರತಕ್ಕೂ ಕಳಂಕ ತಟ್ಟುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ನೋಂದಾಯಿತ ಏಜೆಂಟರ ಮೂಲಕ ಸೌದಿಯಲ್ಲಿ ಉದ್ಯೋಗ ಪಡೆಯುವವರು 2 ವರ್ಷಗಳ ಅವಧಿಗೆ ಕಾನೂನಾತ್ಮಕವಾಗಿ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಸಂಸ್ಥೆಗೆ ಕಟ್ಟುವ ಹಣವನ್ನು 2 ವರ್ಷಗಳ ಉದ್ಯೋಗ ಮುಗಿದಿ ಹಿಂದಕ್ಕೆ ಹೋಗುವಾಗ ಹಿಂದಕ್ಕೆ ನೀಡಲಾಗುತ್ತದೆ. ಆದರೇ ನೊಂದಾಯಿತರಲ್ಲದ ಏಜೆಂಟರು ನಿಗಧಿಗಿಂತ ಹೆಚ್ಚು ಹಣವನ್ನು ಪಡೆದು ಹಿಂದಕ್ಕೆ ನೀಡದೇ ಮೋಸ ಮಾಡುತ್ತಾರೆ, ಕಾನೂನಿನಿಂದಲೂ ತೊಂದರೆಗೊಳಗಾಗುತ್ತಾರೆ ಎಂದು ಈ ಪತ್ರದಲ್ಲಿ ಎಚ್ಚರಿಸಲಾಗಿದೆ.

ಇಂತಹ ಏಜೆಂಟರ ಬಗ್ಗೆ ರಾಜ್ಯದಲ್ಲಿಯೇ ಕ್ರಮ ಕೈಗೊಳ್ಳುವಂತೆ ರಾಯಭಾರಿ ಕಚೇರಿ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದೆ. ಸರ್ಕಾರವು ಈ ಪತ್ರವನ್ನು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಅದರಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಅವರು ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಿ, ಇಂತಹ ನೊಂದಾಯಿತರಲ್ಲದ ಏಜೆಂಟರ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

ಪಡುಬಿದ್ರಿ ಟೋಲ್ಗೇಟ್‍ನಲ್ಲಿ ಎಲ್ಲಾ ಗೇಟುಗಳನ್ನು ತೆರೆಯದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಕೂಡಲೇ ಕೋಟ ಹಾಗೂ ಪಡುಬಿದ್ರೆ ಪೊಲೀಸರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಎಸ್ಪಿ ಸೂಚಿಸಿದರು.

ಕಲ್ಯಾಣಪುರ ಸಂತೆ ಸಂದರ್ಭ ಟ್ರಾಫಿಕ್ ಜಾಮ್ , ವಂಡ್ಸೆಯಲ್ಲಿ ಪಾರ್ಕಿಂಗ್ ಸಮಸ್ಯೆ, ಕೆಲವೆಡೆ ರಾತ್ರಿವರೆಗೂ ಡಿಜೆ ಶಬ್ದಗಳಿಂದ ಸಮಸ್ಯೆ, ಬುಲೆಟ್‍ಗಳ ಕರ್ಕಶ ಧ್ವನಿಯ ಬಗ್ಗೆ, ಮುಳ್ಳುಕಟ್ಟೆಯಲ್ಲಿ ಸರಕಾರಿ ಭೂಮಿಯಲ್ಲೆ ಮಣ್ಣು ತೆಗೆಯುವ ಬಗ್ಗೆ, ಹೆಜಮಾಡಿ, ಶಂಕರನಾರಾಯಣ ಸೌಡ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು ಒಟ್ಟು 29 ಕರೆಗಳು ಬಂದಿದ್ದವು..

ಕಳೆದ ಒಂದು ವಾರದ ಅವಧಿಯಲ್ಲಿ ಒಟ್ಟು 3 ಮಟ್ಕಾ ಪ್ರಕರಣಗಳಲ್ಲಿ ೪ ಮಂದಿಯನ್ನು ಬಂಧಿಸಿದ್ದು, 4 ಇಸ್ಪೀಟು ಪ್ರಕರಣಗಳಲ್ಲಿ 14 ಮಂದಿಯನ್ನು ಬಂಧಿಸಲಾಗಿದೆ. ಗಾಂಜಾ ಸೇವನೆಯ 2 ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದು, 99 ಕೋಟ್ಪಾ ಪ್ರಕರಣ, 29 ಕುಡಿದು ವಾಹನ ಚಲಾವಣೆ, 138 ಕರ್ಕಶ ಹಾರ್ನ್, 905 ಹೆಲ್ಮೇಟ್ ರಹಿತ ಚಾಲನೆ ಕೇಸು ದಾಖಲು ಮಾಡಲಾಗಿದೆ ಎಂದರು.

Comments are closed.