ಉಡುಪಿ: ವೀಸಾ ಅವಧಿ ಮುಗಿದರೂ ಭಾರತದಲ್ಲೇ ಉಳಿದಿರುವ ಆರೋಪದಡಿ ನೈಜೀರಿಯನ್ ಪ್ರಜೆಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ವೀಸಾ ಅವಧಿ ಮುಗಿದಿದ್ದ ರಾಜಿ ರಕೀಬ್ ಬಬತುಂಡೆ ಬಂಧಿತ ಆರೋಪಿ.
ಮಣಿಪಾಲ ವಿವಿ ವಿದ್ಯಾರ್ಥಿಯಾಗಿ ಭಾರತಕ್ಕೆ ಬಂದಿದ್ದ ರಾಜಿ ರಕೀಬ್ ಮಣಿಪಾಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಮಣಿಪಾಲ್ ಸ್ಕೂಲ್ ಆಫ್ ಅಲೈಡ್ ಸಯನ್ಸ್ ಹಳೆ ವಿದ್ಯಾರ್ಥಿ ಈತ. ಸಬ್ಜೆಕ್ಟ್ ನಲ್ಲಿ ಬ್ಯಾಕ್ ಇದೆಯೆಂದು ಕಾಲೇಜಿನಲ್ಲಿ ಸಮಯ ಕಳೆಯುತ್ತಿದ್ದ ರಕೀಬ್ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ರಕೀಬ್ ಗೆ ಅ.30 ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Comments are closed.