ಮಂಗಳೂರು, ಫೆಬ್ರವರಿ.1: ಅಖಿಲ ಭಾರತ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ, ಸಂಸದ ಇ.ಅಹ್ಮದ್ ಅವರ ನಿಧನಕ್ಕೆ ದ.ಕ.ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಧ್ಯಕ್ಷ ಸಿ.ಅಹ್ಮದ್ ಜಮಾಲ್ ಸಂತಾಪ ಸೂಚಿಸಿದ್ದಾರೆ.
ಇವರ ನಿಧನಕ್ಕೆ ಎಂಎಸ್ಎಫ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ನೌಶಾದ್ ಮಲಾರ್ , ಎಂಎಸ್ಎಫ್ ಜಿಲ್ಲಾ ಕಾರ್ಯದರ್ಶಿ ಮುಫೀಝ್ ಮಿತ್ತಬೈಲು , ಸಫ್ವಾನ್ ಬಂಟ್ವಾಳ , ಮುನಾಝ್ ತೋಡಾರು , ಮುಸ್ಲಿಂ ಯೂತ್ ಲೀಗ್ ದ.ಕ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಪೂಪಿ ಕನಕಮಜಲು , ಯೂತ್ ಲೀಗ್ ಪ್ರ.ಕಾರ್ಯದರ್ಶಿ ಅಬ್ದುಸ್ಸಮದ್ ಸಾಲೆತ್ತೂರು , ಯೂತ್ ಲೀಗ್ ಜಿಲ್ಲಾ ಕಾರ್ಯಸಂಯೋಜಕ ಅಬ್ದುಲ್ಲಾ ರಹ್ಮಾನಿ , ಮುಸ್ಲಿಂ ಲೀಗ್ ರಾಜ್ಯ ಸಮಿತಿ ಸದಸ್ಯ ಸಿದ್ದೀಖ್ ಅಬ್ದುಲ್ ಖಾದರ್ ಬಂಟ್ವಾಳ, ಜಿಲ್ಲಾ ನೇತಾರರಾದ ಅಹ್ಮದ್ ಜಮಾಲ್, ಸಯ್ಯದ್ ಬಾಷಾ ತಂಙಲ್ , ಫಯಾಝ್ ಜೋಕಟ್ಟೆ , ಎಂಎಸ್ಎಫ್ ಸುಳ್ಯ ಕ್ಷೇತ್ರ ಸಮಿತಿ ಸಂತಾಪವನ್ನು ಸೂಚಿಸಿದೆ .
ಬಂದರ್ ನಲ್ಲಿರುವ ಮುಸ್ಲಿಂ ಲೀಗ್ ಕಚೇರಿಯಲ್ಲಿ ಫೆ.2ರಂದು ಅಪರಾಹ್ನ 3ಕ್ಕೆ ಸಂತಾಪ ಸೂಚಕ ಸಭೆ ನಡೆಯಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಶೀರ್ ಉಳ್ಳಾಲ್ ತಿಳಿಸಿದ್ದಾರೆ.
___ವಾಭಾ
Comments are closed.