ಕರಾವಳಿ

ಬಿ.ಆರ್ ಶೆಟ್ಟಿ ಅವರ ಪುತ್ರನ ವಿವಾಹಕ್ಕೆ ಗಣ್ಯರಿಂದ ಶುಭ ಹಾರೈಕೆ : ವಧೂವರರಿಗೆ ಶುಭ ಹಾರೈಸಿದ ಸಿ.ಎಮ್.

Pinterest LinkedIn Tumblr

ಮಂಗಳೂರು,ಜನವರಿ,6: ಮಂಗಳೂರಿನ ಹೊರವಲಯದ ಅಡ್ಯಾರ್ ಸಮೀಪದ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಗುರುವಾರ ಸಂಜೆ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್ ಶೆಟ್ಟಿ ಅವರ ಪುತ್ರ ಬಿನಯ್ ಶೆಟ್ಟಿ ಹಾಗೂ ಶಿವಾನಿ ಅವರ ಮದುವೆಯ ಅರಕ್ಷತೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಗಮಿಸಿ ವಧೂವರರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಲೋಕಸಭಾ ಕಾಂಗ್ರೇಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಚಿವರಾದ ಆರ್.ವಿ. ದೇಶಪಾಂಡೆ, ಬಿ. ರಮಾನಾಥ ರೈ. ಕೆ.ಜೆ.ಜಾರ್ಜ್, ಪ್ರಮೋದ್ ಮಧ್ವ್ರರಾಜ್, ಶಾಸಕರಾದ ಅಭಯಚಂದ್ರ ಜೈನ್, ಶಂಕುಂತಳಾ ಶೆಟ್ಟಿ, ಹಾಗೂ ದುಬೈಯ ಖ್ಯಾತ ಉದ್ಯಮಿ ಅಕ್ಮೇ ಸಂಸ್ಥೆಯ ಮಾಲ್ಹಕ ಹರೀಶ್ ಸೇರಿಗಾರ್ ಮುಂತಾದವರು ಪಾಲ್ಗೊಂಡಿದ್ದರು.

Comments are closed.