ಕರಾವಳಿ

ಕೋಟೇಶ್ವರ: ಕಾರಿನ ಗಾಜಿನ ಮೇಲೆ ಕಲ್ಲು ಎತ್ತಿ ಹಾಕಿ ಹಾನಿಗೊಳಿಸಿದ ದುಷ್ಕರ್ಮಿಗಳು

Pinterest LinkedIn Tumblr

ಕುಂದಾಪುರ: ರಾತ್ರಿ ವೇಳೆ ಮನೆ ಸಮೀಪದಲ್ಲಿ ನಿಲ್ಲಿಸಿದ್ದ ಕಾರಿನ ಮುಂಭಾಗದ ಗಾಜಿನ ಮೇಲೆ ದುಷ್ಕರ್ಮಿಗಳು ಶಿಲೆಗಲ್ಲು ಎತ್ತಿಹಾಕಿ ಹಾನಿ ಮಾಡಿದ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರದ ಹಳೆ‌ಅಳಿವೆ ಸಮೀಪದ ಕುಂಬ್ರಿ ಎಂಬಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

kundapura_car_dammege-3 kundapura_car_dammege-4 kundapura_car_dammege-7 kundapura_car_dammege-2 kundapura_car_dammege-1 kundapura_car_dammege-6 kundapura_car_dammege-5

ಕುಂಬ್ರಿ ನಿವಾಸಿ ಗೋವಿಂದ ಮೊಗವೀರ ಎನ್ನುವವರಿಗೆ ಸೇರಿದ ಕಾರು ಇದಾಗಿದ್ದು ಕೋಟೇಶ್ವರದಲ್ಲಿ ಬಾಡಿಗೆ ಕಾರು ಚಾಲಕರಾಗಿ ಗೋವಿಂದ ಅವರು ಜೀವನ ಸಾಗಿಸುತ್ತಿದ್ದರು. ಶನಿವಾರ ಬೆಳಿಗ್ಗೆ ಬಾಡಿಗೆ ಇದ್ದ ಕಾರಣ ರಾತ್ರಿ ಮನೆ ಸಮೀಪ ಕಾರು ತಂದಿಟ್ಟು ಮನೆಗೆ ತೆರಳಿದ್ದಾರೆ. ಬೆಳಿಗ್ಗೆ ಬಂದು ನೋಡುವಾಗ ಕಾರಿನ ಮುಂಭಾಗದ ಗಾಜಿನ ಮೇಲೆ ಕಿಡಿಗೇಡಿಗಳು ದೊಡ್ಡ ಗಾತ್ರದ ಶಿಲೆಗಲ್ಲು ಎತ್ತಿಹಾಕಿದ್ದು ಇದರ ಪರಿಣಾಮ ಗಾಜು ಸಂಪೂರ್ಣ ನಜ್ಜುಗುಜ್ಜಾಗಿದೆ.

ಸುಮಾರು 13 ವರ್ಷಗಳಿಂದ ಚಾಲಕ ವೃತ್ತಿ ಮಾಡುತ್ತಿರುವ ಗೋವಿಂದ ಅವರು ಈ ಘಟನೆಯಿಂದ ನೊಂದಿದ್ದು ಸದ್ಯ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕುಂಬ್ರಿ ಪರಿಸರದಲ್ಲಿ ನಡೆದ ಇಂತಹ ಘಟನೆಯಿಂದಾಗಿ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದು ಪೊಲೀಸರು ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
—————–
ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.