ಕರಾವಳಿ

ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಗೆ ಬಸ್ ಢಿಕ್ಕಿ ಹೊಡೆದು ಮೃತ್ಯು : ಪರಾರಿಯಾದ ಬಸ್ ಉಡುಪಿಯಲ್ಲಿ ಪತ್ತೆ

Pinterest LinkedIn Tumblr

teacher-axident_1

ಬೆಳ್ತಂಗಡಿ, ಡಿ.20: ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಗೆ ಬಸ್ ಢಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಿಗ್ಗೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಶಿಕ್ಷಕ ದಿನಕರ ಹೆಗ್ಡೆ (48) ಎಂದು ಗುರುತಿಸಲಾಗಿದೆ.. ಸರಕಾರಿ ಶಾಲೆಯ ಶಿಕ್ಷಕನಾಗಿರುವ ದಿನಕರ ಹೆಗ್ಡೆ ವಾಕಿಂಗ್ ಹೋಗುತ್ತಿದ್ದ ಸಂದರ್ಭ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪರಾರಿಯಾದ ಬಸ್ ಉಡುಪಿಯಲ್ಲಿ ಪತ್ತೆ :

ಗುರವಾಯನಕೆರೆ ಸಮೀಪ ಬೆಳಗ್ಗಿನ ಜಾವ ವಾಕಿಂಗ್ ಗೆ ಹೊರಟಿದ್ದ ಶಿಕ್ಷಕನಿಗೆ ಢಿಕ್ಕಿಹೊಡೆದು ಪರಾರಿಯಾಗಿದ್ದ ಬಸ್ಸನ್ನು ಕೆಲವೇ ಗಂಟೆಗಳಲ್ಲಿ ಉಡುಪಿಯಲ್ಲಿ ಪತ್ತೆಹಚ್ಚಲಾಗಿದೆ.ಇಂದು ಬೆಳಗಿಗನ ಜಾವ ಗುರುವಾಯನಕೆರೆ ಸಮೀಪ ಶಿಕ್ಷಕ ದಿನಕರ ಹೆಗ್ಡೆ ಎಂಬವರು ಅಪರಿಚಿತ ವಾಹನ ಢಿಕ್ಕಿ ಹೊಡೆದು ಮೃತ ಪಟ್ಟಿದ್ದರು.

ರಸ್ತೆ ಬದಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ತಾಲೂಕಿನ ನಾರಾವಿ ಸಮೀಪ ಕುತ್ಲೂರು ನಿವಾಸಿಯಾಗಿರುವ ಇವರು ಬೆಳ್ತಂಗಡಿ ಸಮೀಪ ಮುಂಡೂರು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಕೋಲಾರದಿಂದ ಮಕ್ಕಳನ್ನು ಪ್ರವಾಸಕ್ಕೆ ಕರೆತಂದಿದ್ದ ಖಾಸಗಿ ಬಸ್ ಶಿಕ್ಷಕನಿಗೆ ಢಿಕ್ಕಿಹೊಡೆದು ಪರಾರಿಯಾಗಿತ್ತು. ಬೆಳ್ತಂಗಡಿ ಪೋಲೀಸರು ನೀಡಿದ ಮಾಹಿತಿಯಂತೆ ಅಪಘಾತವೆಸಗಿ ಪರಾರಿಯಾದ ಬಸ್ ಅನ್ನು ಉಡುಪಿಯಲ್ಲಿ ಪತ್ತೆ ಹಚ್ಚಲಾಗಿದೆ.ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

Comments are closed.