ಕರಾವಳಿ

ಬ್ರಹ್ಮಾವರ: ಆಂಬುಲೆನ್ಸ್ ಹಾಗೂ ಬಸ್ ಅಪಘಾತ: ಕಿಲೋಮೀಟರ್ ಉದ್ದಕ್ಕೂ ಟ್ರಾಫಿಕ್ ಜಾಮ್

Pinterest LinkedIn Tumblr

ಉಡುಪಿ: ಬ್ರಹ್ಮಾವರ ಸಮೀಪದ ಹೇರೂರು ಸೇತುವೆ ಮೇಲೆ ಖಾಸಗಿ ಬಸ್ ಮತ್ತು ಅಂಬ್ಯುಲೆನ್ಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಉಡುಪಿಯಿಂದ ಬ್ರಹ್ಮಾವರಕ್ಕೆ ಬರುತ್ತಿದ್ದ ಅಂಬ್ಯುಲೆನ್ಸ್ ಮತ್ತು ಬ್ರಹ್ಮಾವರದಿಂದ ಉಡುಪಿಯತ್ತ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದೆ.

brahmavara_accident_udupi-1 brahmavara_accident_udupi-2 brahmavara_accident_udupi-3 brahmavara_accident_udupi-4 brahmavara_accident_udupi-5 brahmavara_accident_udupi-6

ಅಪಘಾತದಿಂದಾಗಿ ಅಂಬ್ಯುಲೆನ್ಸ್ ಒಳಗೆ ಸಿಕ್ಕಿ ಹಾಕಿಕೊಂಡ ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಉಡುಪಿ ಸಂತೆಕಟ್ಟೆಯಿಂದ ಬ್ರಹ್ಮಾವರದ ವರೆಗೆ ಕಿಲೋಮೀಟರ್ ಉದ್ದಕ್ಕೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಹೇರೂರು ಹಳೆಯ ಸೇತುವೆ ದುರಸ್ತಿ ಹಿನ್ನಲೆಯಲ್ಲಿ ಏಕಮುಖ ಸಂಚಾರ ಸ್ಥಗಿತಗೊಳಿಸಿ, ಹೊಸ ಸೇತುವೆಯಲ್ಲಿ ಎರಡು ಕಡೆಯ ವಾಹನ ಸಂಚಾರಕ್ಕೆ ಅವಕಾಶ ನೀಡದ ಹಿನ್ನಲೆಯಲ್ಲಿ ಅಪಘಾತ ಮತ್ತು ಟ್ರಾಫಿಕ್ ಜಾಮ್ ಸ್ಥಿತಿ ನಿರ್ಮಾಣವಾಗಿತ್ತು. ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.