ಮಂಗಳೂರು : ತುಳುನಾಡ ರಕ್ಷಣಾ ವೇದಿಕೆ (ರಿ.), ಸ್ಟೇಟ್ಬ್ಯಾಂಕ್ನಲ್ಲಿರುವ ಕೇಂದ್ರಿಯ ಕಛೇರಿಗೆ ಪ್ರಶಿದ್ಧ ರೂಪದರ್ಶಿ ಹಾಗೂ ಸಿನಿಮಾ ನಾಯಕಿ ನಟಿ ಪೂಜಾ ಶೆಟ್ಟಿ ಅವರು ಇತ್ತೀಚಿಗೆ ಭೇಟಿ ನೀಡಿದರು.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಧ್ಯಕ್ಷರು ಶ್ರೀ ಯೋಗಿಶ್ ಶೆಟ್ಟಿ ಜಪ್ಪು ಹೂಗುಚ್ಚ ನೀಡಿ ಸ್ವಾಗತಿಸಿದರು.
ಈ ಸಂದರ್ಭ ಮಾತಾನಾಡಿದ ನಟಿ ಪೂಜ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆಯು ತುಳುನಾಡ ಜನರ ಪರ ಮತ್ತು ತುಳು ಭಾಷೆ, ತುಳು ಚಿತ್ರರಂಗ, ತುಳು ನೆಲ, ಜಲ, ಅಭಿವೃದ್ಧಿ ಗೊಸ್ಕರ ಆಹರ್ನಿಶಿ ಅವಿರತ ಪ್ರಯತ್ನಿಸುತ್ತಿರುವುದು ತುಳುನಾಡ ಮಕ್ಕಳಾದ ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ತುಳುನಾಡ ರಕ್ಷಣಾ ವೇದಿಕೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ತುಳುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳಾದ ಜೆ.ಬಿ.ಇಬ್ರಾಹಿಂ, ಪ್ರಶಾಂತ್ ಭಟ್ ಕಡಬ, ಆನಂದ್ ಅಮೀನ್ ಅಡ್ಯಾರ್, ರಕ್ಷಿತ್ ಬಂಗೇರ ಕುಡುಪು, ಹರೀಶ್ ಶೆಟ್ಟಿ ಶಕ್ತಿನಗರ, ಶ್ರೀಕಾಂತ್ ಸಾಲಿಯಾನ್, ಜನಾರ್ದನ್ ಬೇಂಗ್ರೆ, ಗಂಗಾಧರ್ ಅತ್ತಾವರ್, ಪ್ರಕಾಶ್ ಪಿ.ಬಿ. ಮೊದಲಾದ ತು.ರಾ.ವೆ. ಮುಖಂಡರು ಉಪಸ್ಫಿತರಿದ್ದರು.
Comments are closed.