ಕರಾವಳಿ

ಹಿಂದೂ ಯುವಕನ ಹೆಸರಲ್ಲಿ ಯುವತಿಗೆ ವಂಚನೆ; ಸಮೀರ್ ಎಂಬಾತ ಪೊಲೀಸ್ ವಶಕ್ಕೆ

Pinterest LinkedIn Tumblr

ಉಡುಪಿ: ಹೊನ್ನಾವರ ಮೂಲದ ಹಿಂದು ಯುವತಿಯೋರ್ವಳನ್ನು ಪುಸಲಾಯಿಸಿ ಅನೈತಿಕತೆಗೆ ಪ್ರಚೋದಿಸುತ್ತಿದ್ದ ಕೋಟ ಪಡುಕರೆಯ ಅನ್ಯಕೋಮಿನ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಹಿಂದೂ ಜಾಗರಣಾ ವೇದಿಕೆ ಮತ್ತು ಕೋಟೆಶ್ವರ ಭಜರಂಗದಳ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಯುವಕನನ್ನು ಪೊಲೀಸರಿಗೆ ಹಿಡಿದೊಪ್ಪಿಸಿದ್ದಾರೆ. ಕೋಟ ಪಡುಕೆರೆ ಮೂಲದ ಸಮೀರ್ ಎಂಬಾತ ಬಂಧಿತ ಆರೋಪಿ.

udupi_kota_sameer-arrest-1 udupi_kota_sameer-arrest-2

ಬಸ್ಸು ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದ ಸಮೀರ್ ತಾನು ಹಿಂದು ಯುವಕ ತನ್ನ ಹೆಸರು ರಾಹುಲ್ ಎಂದು ಯುವತಿಗೆ ಪರಿಚಯಿಸಿಕೊಂಡಿದ್ದ. ಬಸ್ಸಿನಲ್ಲಿ ಪರಿಚಯವಾದ ಇವರಿಬ್ಬರ ಸ್ನೇಹದ ಬಳಿಕ ಈತ ಪ್ರೀತಿಸುವಂತೆ ಪ್ರೇರೇಪಿಸಿದ್ದ ಅಲ್ಲದೇ ಬಲವಂತಾಗಿ ಅಸಭ್ಯವಾಗಿಯೂ ವರ್ತಿಸುತ್ತಿದ್ದ ಎನ್ನಲಾಗಿದೆ. ಭಾನುವಾರ ಸಂಜೆ ವೇಳೆ ಆಕೆಗೆ ಬೆದರಿಕೆಯೊಡ್ಡಿ ತನ್ನ ಮನೆಗೆ ಬರುವಂತೆ ಪ್ರೇರೇಪಿಸಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಅಡ್ಡಗಟ್ಟಿ ಕೋಟ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಮೀರ್ ಈ ಹಿಂದೆ ಕೂಡ ಕೋಟದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಬಗ್ಗೆ ಕೋಟ ಠಾಣೆಯಲ್ಲಿ ಎರಡು ಪ್ರಕರಣಗಳಿದ್ದು ಇಂದು ಪುನಹ ತನ್ನ ಹಳೇ ಛಾಳಿ ಮುಂದುವರೆಸಿದ್ದ ಎನ್ನಲಾಗಿದೆ. ಸಮೀರ ಸದ್ಯ ಹಿರಿಯಡ್ಕ ಜೈಲಿನಲ್ಲಿದ್ದಾನೆ.

Comments are closed.