ಕುಂದಾಪುರ: ಕುಂದಾಪುರದ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಯುಜಿಡಿ ಕಾಮಗಾರಿ ಸಂದರ್ಭ ಕಾರ್ಮಿಕನೋರ್ವ ದಾರುಣವಾಗಿ ಬಲಿಯಾದ ಘಟನೆ ಭಾನುವಾರ ನಡೆದಿದೆ. ಬಿಹಾರ ಮೂಲದ ರೂಪೇಶ್ ಪಾಸ್ವಾನ್ (21) ಸಾವಿಗೀಡಾದ ಯುವಕ.
ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಗಾಗಿ ಕೆಲವು ತಿಂಗಳುಗಳಿಂದ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದ್ದು ಕುಂದಾಪುರದ ನಾನಾಸಾಹೇಬ್ ರಸ್ತೆಯ ವ್ಯಾಸರಾಯ ಕಲ್ಯಾಣಮಂಟಪ ಹಿಂಭಾಗದ ಡಾಮರು ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನದ ಸುಮಾರಿಗೆ ಕಾಮಗಾರಿ ನಡೆಯುತ್ತಿತ್ತು. ರಸ್ತೆಯ ಮಧ್ಯೆ ಎರಡೂವರೆ ಅಡಿ ಅಗಲ 7 ಅಡಿ ಅಗಲ ಆಳಕ್ಕೆ ಜೇಸಿಬಿಯಲ್ಲಿ ಹೊಂಡ ತೆಗೆಯಲಾಗಿದ್ದು ಅದರೊಳಗೆ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅದೇ ರಸ್ತೆಯಲ್ಲಿ ಜೇಸಿಬಿ ಕೆಲಸ ಮಾಡುತ್ತಿದ್ದ ಕಾರಣ ಅದರ ಭಾರದ ಒತ್ತಡಕ್ಕೆ ಸಡಿಲವಾದ ಮಣ್ಣು ಕುಸಿದು ಕಾರ್ಮಿಕ ರೂಪೇಶ್ ಮೇಲೆ ಬಿದ್ದಿದೆ. ಈ ವೇಳೆ ಜೇಸಿಬಿ ಚಲಾಯಿಸುತ್ತಿದ್ದ ಆಪರೇಟರ್ ಕೂಡ ಅಲ್ಲಿಂದ ಪರಾರಿಯಾಗಿದ್ದು ಸ್ಥಳೀಯರು ರೂಪೇಶನನ್ನು ಬಚವ್ ಮಾಡಲು ಹರಸಾಹಸಪಟ್ಟು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರಾದರೂ ಕೂಡ ಅಷ್ಟೋತ್ತಿಗಾಗಲೇ ಆತ ಸಾವನ್ನಪ್ಪಿದ್ದ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.