ಕರಾವಳಿ

ಮರವಂತೆ ಸಮುದ್ರದಲ್ಲಿ ಅಪರಿಚಿತ ಶವ ಪತ್ತೆ : ಗುರುತು ಇನ್ನೂ ನಾಪತ್ತೆ

Pinterest LinkedIn Tumblr

ಕುಂದಾಪುರ: ಕುಂದಾಪುರದ ತ್ರಾಸಿ ಸಮೀಪದ ಮರವಂತೆ ಮೀನುಗಾರಿಕಾ ಬಂದರು ಪ್ರದೇಶದ ಸಮುದ್ರದಲ್ಲಿ ಶುಕ್ರವಾರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ಶವ ಸದ್ಯ ಕುಂದಾಪುರ ಸರಕಾರಿ ಆಸ್ಪತ್ರೆಯ ಶವಾಗಾರದ ಶೈಥಲೀಕರಣ ಘಟಕದಲ್ಲಿದ್ದು ಶನಿವಾರ ಸಂಜೆಯವರೆಗೂ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಮತ್ತು ಯಾವುದೇ ವಾರೀಸುದಾರರು ಬಂದಿಲ್ಲ.

kundapura_unidentified_dead-body-1

kundapura_unidentified_dead-body-2

kundapura_unidentified_dead-body-3

kundapura_unidentified_dead-body-4

ಶುಕ್ರವಾರ ಸಂಜೆ ಸುಮಾರಿಗೆ ಸಮುದ್ರದಲ್ಲಿ ವ್ಯಕ್ತಿಯ ಶವ ತೇಲುತ್ತಿರುವುದು ಪತ್ತೆಯಾಗಿದ್ದು ಪೊಲಿಸರು ಹಾಗೂ ಕರಾವಳಿ ಕಾವಲುಪಡೆಯವರು ಸ್ಥಳಕ್ಕೆ ತೆರಳಿದ್ದರು. ಆದರೇ ಬೋಟ್ ಮೂಲಕ ಶವ ತರಬೇಕಿದ್ದ ಕಾರಣ ಕುಂದಾಪುರ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ ಮೇರೆಗೆ ಅವರು ಸ್ಥಳಕ್ಕಾಗಮಿಸಿ ಶವವನ್ನು ಹರಸಾಹಸಪಟ್ಟು ದಡಕ್ಕೆ ತಂದಿದರು. ಬಳಿಕ ಶವವನ್ನು ಗಂಗೊಳ್ಳಿ 24*7 ಹೆಲ್ಪ್ ಲೈನ್ ಆಂಬುಲೆನ್ಸ್ ಮೂಲಕ ಕುಂದಾಪುರ ಶವಗಾರಕ್ಕೆ ರವಾನಿಸಲಾಗಿತ್ತು. ಮ್ರತ ವ್ಯಕ್ತಿಯು ಅಂದಾಜು ೫೦ ವರ್ಷ ಪ್ರಾಯದವನಾಗಿದ್ದು ಕೈಯಲ್ಲಿ ಶಿವನ ಹಚ್ಚೆ, ಲಕ್ಷ್ಮಣ ಹೆಸರು ಬರೆದಿದ್ದು ಈವರೆಗೂ ಆತನ ಗುರುತು ಪತ್ತೆಯಾಗಿಲ್ಲ ಮತ್ತು ಆತನ ಸಂಬಂಧಿಕರು ಈವ್ರರೆಗೂ ಬಂದಿಲ್ಲ ಎನ್ನಲಾಗಿದೆ.

ಇನ್ನು ಸ್ಥಳೀಯ ಯಾವುದೇ ಪೊಲೀಸ್ ಠಾಣೆಗಳಲ್ಲಿಯೂ ವ್ಯಕ್ತಿ ನಾಪತ್ತೆಯ ಬಗ್ಗೆ ಪ್ರಕರಣ ದಾಖಲಾಗದೇ ಇರುವ ಕಾರಣ ಈತನ ಗುರುತು ಪತ್ತೆ ಕಷ್ಟವಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.