ಕರಾವಳಿ

ನೀರುಮಾರ್ಗದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಮಾರಣಾಂತಿಕ ಹಲ್ಲೆ : ಐವರ ಬಂಧನ

Pinterest LinkedIn Tumblr

attach_image

ಮಂಗಳೂರು, ಅ. 19: ಕ್ಷುಲ್ಲಕ ಕಾರಣಕ್ಕಾಗಿ ತಂಡವೊಂದು ಇಬ್ಬರು ವ್ಯಕ್ತಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಹೊರವಲಯದ ನೀರುಮಾರ್ಗದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಿಶೋರ್ (25), ಪ್ರಜ್ವಿತ್ (26), ನಿತಿನ್ ಪೂಜಾರಿ (25), ರವೀಂದ್ರ ವಿಕ್ರಮ್ (24), ನಿತೀಶ್ ಶೆಟ್ಟಿ (27) ಎನ್ನಲಾಗಿದೆ. ಗಾಯಾಳುಗಳನ್ನು ಮನೋಜ್ ಹಾಗೂ ಜಯಪ್ರಕಾಶ್‌ ಎಂದು ಗುರುತಿಸಲಾಗಿದೆ.

ಮನೋಜ್ ಎಂಬವರು ಟವೆರಾ ಗಾಡಿಯಲ್ಲಿ ಸಂಜೆ 7 ಗಂಟೆಗೆ ನೀರುಮಾರ್ಗದ ಬಾರೊಂದಕ್ಕೆ ಹೋಗಿದ್ದಾಗ, ಅವರ ಪರಿಚಯದವರಾದ ಆರೋಪಿಗಳು 3ರಿಂದ 4ಮಂದಿ ಇತರರೊಂದಿಗೆ ಬಂದು ಮನೋಜ್ ಅವರ ತಲೆಗೆ ಕಡಿಯಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಮನೋಜ್ ಜೊತೆಗಿದ್ದ ಜಯಪ್ರಕಾಶ್ ತಡೆಯಲು ಪ್ರಯತ್ನಿಸಿದ್ದು, ಕಿಶೋರ್ ಎಂಬಾತ ತಲವಾರನ್ನು ಬೀಸಿದಾಗ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಚೇರ್ ತುಂಡಾಗಿ ಮನೋಜ್ ಅವರಿಗೆ ಗಾಯವಾಗಿದೆ.

ಜಯಪ್ರಕಾಶ್‌ಗೂ ತಂಡ ಸೋಡಾ ಬಾಟ್ಲಿಯಿಂದ ಹಲ್ಲೆ ಮಾಡಿದ್ದಲ್ಲದೆ, ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Comments are closed.