ನವದೆಹಲಿ: ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ಪ್ರಧಾನ ಕಾರ್ಯದರ್ಶಿ ಭೂಪಿಂದರ್ ಯಾದವ್ ಸಮ್ಮುಖದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಸುರೇಶ್ ಗೋಪಿ ಭಾರತೀಯ ಜನತಾ ಪಕ್ಷ ಸೇರಿದ್ದಾರೆ.
“ಸುರೇಶ್ ಗೋಪಿ ಪಕ್ಷ ಸೇರಿರುವುದರಿಂದ ಬಿಜೆಪಿ ಶಕ್ತಿ ಕೇರಳದಲ್ಲಿ ಇನ್ನು ವೃದ್ಧಿಸಲಿದೆ” ಎಂದು ನಟ ಪಕ್ಷಕ್ಕೆ ಅಧಿಕೃತವಾಗಿ ಸೇರಿದ ಸಂದರ್ಭದಲ್ಲಿ ನಖ್ವಿ ಹೇಳಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟನನ್ನು ಏಪ್ರಿಲ್ ನಲ್ಲಿ ರಾಜ್ಯಸಭೆಗೆ ನೇಮಿಸಲಾಗಿತ್ತು. ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ತಾರಾ ಪ್ರಚಾರಕರಾಗಿ ಕೂಡ ಗೋಪಿ ಪಾಲ್ಗೊಂಡಿದ್ದರು.
Comments are closed.