ಮಂಗಳೂರು : ರಾಷ್ಟ್ರಸೇವಿಕಾ ಸಮಿತಿ ಮಂಗಳೂರು ವಿಭಾಗದಿಂದ 80ರ ಸಂಭ್ರಮದ ಅಂಗವಾಗಿ ನಗರದ ಪುರಭವನದಲ್ಲಿ ಸಾರ್ವಜನಿಕ ಸಮಾರಂಭ ಜರಗಿತು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹಕ ಮಾ.ವೇದಾ ಕುಲಕರ್ಣಿ ಅವರು, ನಾವೆಲ್ಲ ಒಂದು ಎಂಬ ಭಾವನೆ ಜಾಗೃತವಾದಾಗ ಸಹೋದರಂತೆ ಮನೋಭಾವ ಮತ್ತಷ್ಟು ಗಟ್ಟಿಯಾಗಲಿದೆ. ಮಾನವೀಯತೆಯ ಮೂಲಕ ರಾಷ್ಟ್ರಹಿತ ಕಾಯಲು ಸಾದ್ಯ ಎಂದು ಹೇಳಿದರು.
ಸ್ವಾರ್ಥವಿಲ್ಲದ ತ್ಯಾಗ ಮನೋಭಾವದ ಬದುಕಿನಲ್ಲಿ ನೆಮ್ಮದಿ ಇದೆ. ಈಗ ನಾವು ಅದನ್ನೆಲ್ಲ ಕಳೆದುಕೊಳ್ಳುತ್ತಿದ್ದು, ಅಶಾಂತಿ ಸೃಷ್ಠಿಯಾಗಿ ಸ್ವಾರ್ಥವೇ ವಿಜೃಂಭಿಸುತ್ತಿದೆ. ಸಂಕುಚಿತ ಮನೋವೃತ್ತಿ ಹೆಚ್ಚಳವಾಗುತ್ತಿದೆ. ಸ್ತ್ರೀಯಲ್ಲಿ ಸೃಜನ ಮತ್ತು ಸಂಹಾರ ಶಕ್ತಿಯಿದೆ ಅದುದರಿಂದ ಸ್ತ್ರೀಪಾತ್ರ ಸಮಾಜದಲ್ಲಿ ದೊಡ್ಡದು ಎಂಬುದನ್ನು ಅರಿತುಕೊಳ್ಳಬೇಕಾಗಿದೆ ಎಂದು ಕುಲಕರ್ಣಿ ಹೇಳಿದರು.
ವಿಭಾಗ ಕಾರ್ಯವಾಹಿಕಾ ಗಿರಿಜಾ ಭಟ್ ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕು ಬೌದ್ಧಿಕ್ ಪ್ರಮುಖ್ ಪ್ರೇಮಲತಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ದಕ್ಷಿಣ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಕುಮುದಿನಿ ಸ್ವಾಗತಿಸಿದರು. ಮಹಾನಗರ ಸಂಚಾಲಕ ವೇದಾವತಿ ಭಟ್ ವಂದಿಸಿದರು.
ಸಾರ್ವಜನಿಕ ಸಮಾರಂಭಕ್ಕೆ ಮುನ್ನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಹತ್ತಿರದಿಂದ ಪುರಭವನವರೆಗೆ ಬೃಹತ್ ಮೆರವಣಿಗೆ ನಡೆಯಿತು.
Comments are closed.