ಕರಾವಳಿ

ಉರ್ವಾ ಮೈದಾನ: ವಿವಿ ಮಟ್ಟದ ಮೂರು ದಿನಗಳ ಅಂತರ್ ಕಾಲೇಜು ಕಬಡ್ಡಿ ಪಂದ್ಯಾವಳಿ ಆರಂಭ

Pinterest LinkedIn Tumblr

urva_vvcolleg_kabbadi_1

ಮಂಗಳೂರು, ಅ.17: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಬೆಸೆಂಟ್ ಸಂಧ್ಯಾ ಕಾಲೇಜು, ಸಂಧ್ಯಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿರುವ ಮಂಗಳೂರು ವಿವಿ ಮಟ್ಟದ ಮೂರು ದಿನಗಳ ಅಂತರ್ ಕಾಲೇಜು ಕಬಡ್ಡಿ ಪಂದ್ಯಾವಳಿಗೆ ಸೋಮವಾರ ಉರ್ವಾ ಮೈದಾನದಲ್ಲಿ ಚಾಲನೆ ನೀಡಲಾಯಿತು.

urva_vvcolleg_kabbadi_3

ಈ ಪಂದ್ಯಾವಳಿಯ ವಿಜೇತರಿಗೆ ನೀಡಲಾಗುವ ಶ್ರೀ ಧರ್ಮಸ್ಥಳ ರತ್ನಾವರ್ಮ ಹೆಗ್ಗಡೆ ಮೆಮೋರಿಯಲ್ ಟ್ರೋಫಿಯನ್ನು ಶಾಸಕ ಜೆ.ಆರ್.ಲೋಬೋ ಅನಾವರಣಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವುಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಕುಡ್ಪಿಜಗದೀಶ್ ಶೆಣೈ ವಹಿಸಿದ್ದರು.

urva_vvcolleg_kabbadi_2

ಕಾರ್ಯಕ್ರಮದಲ್ಲಿ ಬೆಸೆಂಟ್ ಸಂಧ್ಯಾ ಕಾಲೇಜು ಪಿಟಿಎ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ದ.ಕ. ಅಮೆಚೂರು ಕಬ್ಬಡಿ ಅಸೋಸಿಯೇಶನ್ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಬಿ., ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ., ಬೆಸೆಂಟ್ ಸಂಧ್ಯಾ ಕಾಲೇಜು ದೈಹಿಕ ನಿರ್ದೇಶಕ ಹರೀಶ್, ಸಂಚಾಲಕ ನಾರಯಣ್ ಶೆಣೈ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರದೀಪ್, ಪ್ರಾಂಶುಪಾಲ ಡಾ.ಲಕ್ಷ್ಮೀನಾರಾಯಣ ಭಟ್ ಎ. ಉಪಸ್ಥಿತರಿದ್ದರು.

Comments are closed.