ಕರಾವಳಿ

ರಾಮಾಯಣ ಕಾಲದಲ್ಲಿ ನೀವು ರಾವಣ ಆಗಿದ್ದರಾ?; ಸಚಿವ ಪ್ರಮೋದರಿಗೆ ಮಾಜಿ ಶಾಸಕ ರಘುಪತಿಭಟ್ ಪ್ರಶ್ನೆ

Pinterest LinkedIn Tumblr

ಉಡುಪಿ: ವಾಲ್ಮಿಕಿ, ರಾಮ ಹಾಗೂ ಕೃಷ್ಣ ಮಾಂಸಾಹಾರಿಗಳು ಎಂದು ಹೇಳಿಕೆ ನೀಡಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನುಗಾರಕೆ, ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಹೇಳಿಕೆಯನ್ನು ಮಾಜಿ ಶಾಸಕ ರಘುಪತಿಭಟ್ ಖಂಡಿಸಿದ್ದಾರೆ.

udupi_raghupati-bhat_pramodh-madhvaraj

ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಭಟ್, ಶ್ರೀ ರಾಮ ಹಾಗೂ ಶ್ರೀ ಕೃಷ್ಣ ಮಾಂಸಹಾರಿಗಳು ಎನ್ನಲು ಆ ಕಾಲದಲ್ಲಿ  ಪ್ರಮೋದ್ ಮದ್ವರಾಜ್ ಶಕುನಿ ಅಥವಾ ರಾವಣ ಆಗಿದ್ದರಾ ಎಂದು ಪ್ರಶ್ನಿಸಿದರು.ಚೀಪ್ ಪಬ್ಲಿಸಿಟಿಗೋಸ್ಕರ ಈ ಹೇಳಿಕೆಯನ್ನು ಸಚಿವರು ನೀಡಿದ್ದು ಕೋಟ್ಯಾಂತರ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರಿಗೆ ಇದೆ ರೀತಿ ಬೇರೆ ಧರ್ಮದ ಬಗ್ಗೆ ಮಾತನಾಡುವ ದೈರ್ಯ ಇದೆಯಾ ಎಂದು ಸವಾಲು
ಹಾಕಿದರು.

ಇನ್ನು ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವ ವಿಚಾರದ ಬಗ್ಗೆ ಮಾತನಾಡಿದ ಅವರು ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೆ ಅದರ ರಕ್ಷಣೆಗೆ ನಾವಿದ್ದೇವೆ. ಈ ಬಗ್ಗೆ ಜಿಲ್ಲಾ ಬಿಜೆಪಿ ಕಾರ್ಯಕಾರಣಿಯಲ್ಲಿ ನಿರ್ಣಯ ಮಾಡಲಾಗಿದೆ. ದುರುದ್ದೇಶದಿಂದ ಬಂದ್ರೆ ಕೃಷ್ಣ ಮಠ ಬಿಡಿ ಉಡುಪಿಗೇ ಬರಲು ಬಿಡೋದಿದ್ದಲ . ಕೋಮು ಸೌಹಾರ್ದ ವೇದಿಕೆಯವರು ನಾಡಿನ ನಕ್ಸಲರು. ಈ ನಾಡಿನ ನಕ್ಸಲರ ವಿರುದ್ದ ಪ್ರತಿಭಟಿಸುವ ಶಕ್ತಿ ಉಡುಪಿಯ ಜನತೆಗೆ ಇದೆ
ಎಂದರು.

Comments are closed.