ಕರಾವಳಿ

2 ಬಾರೀ ರಾಜಿನಾಮೆ ನೀಡಲು ಮುಂದಾದ ಕೋಟ ಪಿ.ಎಸ್.ಐ. ಕಬ್ಬಾಳರಾಜ್ ವರ್ಗ

Pinterest LinkedIn Tumblr

ಉಡುಪಿ: ಆರು ತಿಂಗಳ ಅಂತರದಲ್ಲಿ ಎರಡು ಬಾರಿ ರಾಜಿನಾಮೆ ನೀಡಲು ಮುಂದಾದ ಕೋಟ ಪೊಲೀಸ್ ಠಾಣೆ ಉಪನಿರೀಕ್ಷಕ ಕಬ್ಬಾಳರಾಜ್ ಮಂಗಳೂರಿಗೆ ವರ್ಗವಾಗಿದ್ದು ಕೋಟದಿಂದ ನಿರ್ಗಮಿಸಿದ್ದಾರೆ.

ಕಳೆದ ಒಂದು ವರ್ಷ ನಾಲ್ಕು ತಿಂಗಳಿನಿಂದ ಕೋಟ ಪೊಲೀಸ್ ಠಾಣೆ ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿದ್ದ ಕಬ್ಬಾಳರಾಜ್ ಸದ್ಯ ಮಂಗಳೂರಿನ ಮೆಸ್ಕಾಂ ಇಲಾಖೆಗೆ ವರ್ಗಗೊಂಡಿದ್ದಾರೆ.

udp_kota-si_kabbalaraj-4

ಈ ಹಿಂದೆ ರಾಜ್ಯದಾದ್ಯಂತ ಪೊಲೀಸರು ಮುಷ್ಕರ ನಡೆಸುವ ಬಗ್ಗೆ ಕರೆಕೊಟ್ಟ ವೇಳೆ  ಅದಕ್ಕೆ ಬಂಬಲ ವ್ಯಕ್ತಪಡಿಸಿ ತಾನೂ ಕೂಡ ರಾಜಿನಾಮೆ ನೀಡುವುದಾಗಿ ಹೇಳಿಕೊಂಡಿದ್ದ ಕಬ್ಬಾಳರಾಜ್ ಅವರನ್ನು ಅಂದಿನ ಉಡುಪಿ ಎಸ್ಪಿ ಅಣ್ಣಾಮಲೈ ಮನವೊಲಿಕೆ ಮಾಡಿ ಇಲಾಖೆಯಲ್ಲಿ ಮುಂದುವರಿಯುವಂತೆ ಸೂಚಿಸಿದ್ದರು. ಬಳಿಕ ತಿಂಗಳ ಹಿಂದೆ ನೂತನ ಎಸ್ಪಿ ಜಾಗ ಸಂಬಂಧಿತ ವಿಚಾರದಲ್ಲಿ ಬೈದರೆಮ್ದು ಆಪಾದಿಸಿ ತಮ್ಮ ಡೈರಿಯಲ್ಲಿ ರಾಜಿನಾಮೆ ನೀಡುವುದಾಗಿ ತಿಳಿಸಿ ತೆರಳಿದ ಎಸ್.ಐ. ದಿನವಿಡೀ ಯಾರ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿದ್ದರು. ಮಾರನೇ ದಿನ ಪುನಃ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಜನರಲ್ಲಿ ಗೊಂದಲವನ್ನು ಮೂಡಿಸಿದ್ದರು. ಇದೆಲ್ಲ ಪ್ರಕ್ರಿಯೆಯ ತರುವಾಯ ಅವರನ್ನು ಮಂಗಳೂರು ಮೆಸ್ಕಾಂ ಇಲಾಖೆಗೆ ವರ್ಗ ಮಾಡಲಾಗಿದ್ದು ಇತ್ತೀಚೆಗಷ್ಟೇ ಅವರ ಬೀಳ್ಕೊಡುಗೆ ಸಮಾರಂಭವೂ ಕೂಡ ಗುಪ್ತ್-ಗುಪ್ತ್ ಆಗಿ ನಡೆದಿದೆ ಎನ್ನಲಾಗಿದೆ.

ಸದ್ಯ ಉಡುಪಿ ಟ್ರಾಫಿಕ್ ಠಾಣೆ ಉಪನಿರೀಕ್ಷಕ ರಾಜಗೋಪಾಲ್ ಕೋಟ ಪೊಲೀಸ್ ಠಾಣೆ ಹೆಚ್ಚುವರಿ ಜವಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Comments are closed.