ಕರಾವಳಿ

ಬಂಟರ ಯಾನೆ ನಾಡವರ ಮಾತೃ ಸಂಘದ 2016-19ನೇ ಸಾಲಿನ ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಪುನರಾಯ್ಕೆ

Pinterest LinkedIn Tumblr

ajith_kumar_maladi_1

ಮಂಗಳೂರು, ಅ.13: ಬಂಟರ ಯಾನೆ ನಾಡವರ ಮಾತೃ ಸಂಘದ 2016-19ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಅವರು ಪುನರಾಯ್ಕೆಯಾಗಿದ್ದಾರೆ. ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆ ಹಿನ್ನೆಲೆಯಲ್ಲಿ ನಡೆದ ಚುನಾವಣೆಗೆ ಯಾರೂ ಪ್ರತಿಸ್ಫರ್ಧಿಗಳು ಇಲ್ಲದ ಕಾರಣ ಮುಖ್ಯ ಚುನಾವಣಾಧಿಕಾರಿ ಎಲ್ಲರನ್ನು ಅವಿರೋಧವಾಗಿ ಅಯ್ಕೆ ಮಾಡಿದ್ದಾರೆ.

ಈ ಬಗ್ಗೆ ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಚುನಾವಣಾಧಿಕಾರಿ ಪ್ರಥ್ವಿರಾಜ್ ರೈ (ನ್ಯಾಯವಾದಿ) ಅವರು, ಬಂಟರ ಯಾನೆ ನಾಡವರ ಮಾತೃ ಸಂಘದ 2016-19ನೆ ಸಾಲಿನ ಚುನಾವಣೆಯ ಸಲುವಾಗಿ ಮಾತೃ ಸಂಘವು ಚುನಾವಣಾ ಆಯೋಗವನ್ನು ರಚಿಸಿ, ಅ. 15ರಂದು ಅಧ್ಯಕ್ಷರ ಚುನಾವಣೆ ಹಾಗೂ 21ರಂದು ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಗೆ ದಿನಾಂಕ ನಿಗದಿಪಡಿಸಿತ್ತು. ಆದರೆ, ಅಧ್ಯಕ್ಷ ಸ್ಥಾನ ಹಾಗೂ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಿಂದ ಕಾರ್ಯಕಾರಿ ಸಮಿತಿಗೆ ಪ್ರತಿಸ್ಪರ್ಧಿಗಳಿಲ್ಲದೆ ನಾಮಪತ್ರಗಳು ಸಲ್ಲಿಕೆಯಾದ ಕಾರಣ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.

ajith_kumar_maladi_4

ಮೂರು ಜಿಲ್ಲೆಗಳ ಒಂಬತ್ತು ತಾಲೂಕುಗಳಿಗೆ ಕಾರ್ಯಕಾರಿ ಸಮಿತಿ ಸದಸ್ಯರು ಆಯ್ಕೆಗೊಂಡಿದ್ದು, ಕಾರ್ಕಳ ತಾಲೂಕಿನ ಮಹಿಳಾ ಮೀಸಲಾತಿ ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಆ ಹಿನ್ನೆಲೆಯಲ್ಲಿ ಸಂಘದ ಬೈಲಾ ಪ್ರಕಾರ ತಾಲೂಕಿನ ಕಾರ್ಯಕರ್ತೆಯನ್ನು ಸದಸ್ಯೆಯಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಮೂರು ಜಿಲ್ಲೆಗಳಲ್ಲಿ ಒಟ್ಟು 17,942 ಮತದಾರರಿದ್ದಾರೆ. ಮಂಗಳೂರಿನಲ್ಲಿ ಅತೀ ಹೆಚ್ಚು ಅಂದರೆ 7 ಸಾವಿರಕ್ಕೂ ಹೆಚ್ಚು ಮಂದಿ ಮತದಾರರಿದ್ದಾರೆ ಎಂದು ಅವರು ಹೇಳಿದರು.

ajith_kumar_maladi_2

ನೂತನ ಅಧ್ಯಕ್ಷರಿಂದ ತಾಲೂಕು ಸಮಿತಿ ಸದಸ್ಯರ ವಿವರ ಪ್ರಕಟ :

2016-19ನೆ ಸಾಲಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ನೂತನ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಅವರು ತಮಗೆ ಅವಕಾಶ ನೀಡಿದ ಹಾಗೂ ಪ್ರೋತ್ಸಾಹ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಬಳಿಕ ಸಮಿತಿಗೆ ಅಯ್ಕೆಯಾದ ಎಲ್ಲ ತಾಲೂಕು ಸಮಿತಿ ಸದಸ್ಯರ ವಿವರ ನೀಡಿದರು.

ajith_kumar_maladi_3

ಸಮಿತಿ ಸದಸ್ಯರ ವಿವರ :

ಮಂಗಳೂರು ತಾಲೂಕು

ಮೇಘನಾಥ ಶೆಟ್ಟಿ, ಜಯರಾಮ ಸಾಂತ ಎಸ್., ಸುರೇಶ್ಚಂದ್ರ ಎಂ. ಶೆಟ್ಟಿ, ಎಂ. ಸುಂದರ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಎ. ಸುರೇಶ್ ರೈ, ಶಶಿರಾಜ್ ಶೆಟ್ಟಿ, ರತ್ನಾಕರ ಶೆಟ್ಟಿ, ರವೀಂದ್ರನಾಥ ಎಸ್. ಶೆಟ್ಟಿ, ಆನಂದ ಶೆಟ್ಟಿ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಕೃಷ್ಣ ಪ್ರಸಾದ್ ರೈ, ಉಮೇಶ್ ರೈ ಪದವು ಮೇಗಿನಮನೆ, ಗೋಪಾಲಕೃಷ್ಣ ಶೆಟ್ಟಿ, ಕೇಶವ ಮಾರ್ಲ, ವಿಕಾಸ್ ಶೆಟ್ಟಿ, ಡಾ.ಬಿ. ದೇವದಾಸ್ ರೈ, ವಸಂತ್ ಶೆಟ್ಟಿ, ಡಾ. ಬಿ. ಸಚ್ಚಿದಾನಂದ ರೈ, ಸಬಿತಾ ಆರ್. ಶೆಟ್ಟಿ.

ಕಾಸರಗೋಡು :ಸುಬ್ಬಯ್ಯ ರೈ ಬಿ., ಮಧುಕರ ರೈ ಕೊರೆಕ್ಕಾನ, ಮುಕ್ತಾನಂದ ರೈ, ಸತೀಶ್ ಅಡಪ್ಪ ಸಂಕಬೈಲು, ಲತಾ ಬಿ.ಆರ್., ಎಂ. ಪದ್ಮನಾಭ ಶೆಟ್ಟಿ ವಳಮಲೆ, ಸದಾನಂದ ರೈ ಎಡ್ವಕೇಟ್, ಕೆ. ರಘು ಶೆಟ್ಟಿ, ಕಾರ್ತಿಕ್ ಶೆಟ್ಟಿ.

ಉಡುಪಿ : ಜಯಕರ ಶೆಟ್ಟಿ ಇಂದ್ರಾಳಿ, ಮನೋಹರ್ ಶೆಟ್ಟಿ ತೋನ್ಸೆ, ವಿಠಲ ಶೆಟ್ಟಿ ಶೇಡಿಕೂಡ್ಲು, ಸುಧಾಕರ ಶೆಟ್ಟಿ ಮೈರ್ಮಾಡಿ, ಚಿತ್ತರಂಜನ್ ದಾಸ್ ಹೆಗ್ಡೆ, ಎಚ್. ಶಿವಪ್ರಸಾದ್ ಹೆಗ್ಡೆ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಎಚ್. ಸುದರ್ಶನ ಹೆಗ್ಡೆ, ಗೀತಾ ನಾಗೇಶ್ ಹೆಗ್ಡೆ.

ಕುಂದಾಪುರ : ಕೆಂಚನೂರು ಸೋಮಶೇಖರ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಕೃಷ್ಣ ಪ್ರಸಾದ್ ಅಡ್ಯಂತಾಯ, ಆವರ್ಸೆ ಸುಧಾಕರ ಶೆಟ್ಟಿ, ಕೆ. ವಿಕಾಸ್ ಹೆಗ್ಡೆ, ಬಿ. ಕರುಣಾಕರ ಶೆಟ್ಟಿ ಕೊಲ್ಲೂರು, ಚಿತ್ತರಂಜನ್ ಹೆಗ್ಡೆ ಹರ್ಕೂರು, ಸುಪ್ರೀತಾ ದೀಪಕ್ ಶೆಟ್ಟಿ, ಜಿ. ಗೋಕುಲ ಶೆಟ್ಟಿ.

ಕಾರ್ಕಳ : ಸುನಿಲ್ ಕುಮಾರ್ ಶೆಟ್ಟಿ, ಚೇತನ್ ಶೆಟ್ಟಿ, ಬಿ. ಕರುಣಾಕರ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಕೆ. ಮಂಜುನಾಥ ಶೆಟ್ಟಿ, ಬಿ. ಮಣಿರಾಜ್ ಶೆಟ್ಟಿ.

ಪುತ್ತೂರು : ದಯಾನಂದ ರೈ ಮನವಳಿಕೆ ಗುತ್ತು , ಕೆ. ಸೀತಾರಾಮ್ ರೈ ಸವಣೂರು, ಹೇಮನಾಥ ಶೆಟ್ಟಿ ಕಾವು, ಚಿಕ್ಕಪ್ಪ ನಾಕ್ ಎ., ಎನ್. ಚಂದ್ರಹಾಸ ಶೆಟ್ಟಿ ಮರ್ದಾಳ, ಜಯಪ್ರಕಾಶ್ ರೈ ನೂಜಿಬೈಲು, ಅಜಯ್ ಎಸ್. ಆಳ್ವ, ಮಲ್ಲಿಕಾ ಪ್ರಸಾದ್.

ಬಂಟ್ವಾಳ : ಚಂದ್ರಹಾಸ ಡಿ. ಶೆಟ್ಟಿ, ಕಿರಣ್ ಹೆಗ್ಡೆ, ಎ. ರಾಮಣ್ಣ ರೈ, ಸಂತೋಷ್ ಕುಮಾರ್ ರೈ, ಭಾಸ್ಕರ ಶೆಟ್ಟಿ, ನೇಮಿರಾಜ್ ರೈ, ಪ್ರಕಾಶ್ ಬಿ. ಶೆಟ್ಟಿ, ಪ್ರತಿಭಾ ಎ. ರೈ. ಬೆಳ್ತಂಗಡಿ: ಎಸ್. ಜಯರಾಂ ಶೆಟ್ಟಿ, ಎಂ. ಜಯರಾಮ್ ಭಂಡಾರಿ, ಜಯಂತ್ ಶೆಟ್ಟಿ ಕುಂಟಿಣಿ, ಆಶಾಲತಾ ಬಿ. ರೈ.

ಸುಳ್ಯ : ಪಿ.ಬಿ. ದಿವಾಕರ ರೈ ಪೆರಾಜೆ, ರವೀಂದ್ರನಾಥ್ ಶೆಟ್ಟಿ ಕೆ., ಜಯಪ್ರಕಾಶ್ ರೈ ಎನ್., ರಾಜೀವಿ ಆರ್. ರೈ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.

ajith_kumar_maladi_5

ಪತ್ರಿಕಾಗೋಷ್ಠಿಯಲ್ಲಿ ಉಪ ಚುನಾವಣಾಧಿಕಾರಿ ಉಮೇಶ ಶೆಟ್ಟಿ, ಚುನಾವಣಾಧಿಕಾರಿ ನವೀನ್ ಕುಮಾರ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪಧಾಧಿಕಾರಿಗಳಾದ ಮೇಘನಾಥ ಶೆಟ್ಟಿ, ಸಿಎ ಕೆ. ಮನಮೋಹನ ಶೆಟ್ಟಿ, ಜಯರಾಂ ಶಾಂತ ಮುಂತಾದವರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಎ. ಹೇಮನಾಥ ಶೆಟ್ಟಿ ಕಾವು ವಂದನಾರ್ಪಣೆಗೈದರು.

Comments are closed.