ಕರಾವಳಿ

ಉಡುಪಿ: ಅಪಘಾತದ ಗಾಯಾಳು ಹಿಮಾಂಶು ಬ್ರೈನ್ ಡೆಡ್; ಅಂಗಾಂಗ ದಾನಕ್ಕೆ ಪಾಲಕರ ನಿರ್ಧಾರ

Pinterest LinkedIn Tumblr

ಉಡುಪಿ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಹಿಂಬದಿ ಬೈಕ್ ಸವಾರನ ಅಂಗಾಂಗ ದಾನ ಮಾಡಿದ ಬಗ್ಗೆ ಮಾಹಿತಿ ಲಭಿಸಿದೆ.

udupi_accident_himamshu-death

ಹಿಮಾಂಶು ರಾವ್ (16) ಎನ್ನುವವರ ಅಂಗಾಂಗ ದಾನ ಮಾಡಲಾಗಿದ್ದು ಕಣ್ಣು (ಕಾರ್ನಿಯಾ), ಕಿಡ್ನಿ, ಲಿವರ್ ದಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹಿಮಾಂಶು ರಾವ್ ಬೈಂದೂರಿನ ಖ್ಯಾತ ಮಕ್ಕಳ ತಜ್ಞ ಡಾ. ರವಿರಾಜ್ ಅವರ ಪುತ್ರರಾಗಿದ್ದಾರೆ.

ಸೋಮವಾರ ಬೆಳಿಗ್ಗೆ ಗ್ರೀನ್ ಕಾರಿಡಾರ್ ಮೂಲಕ, ಝೀರೊ ಟ್ರಾಫಿಕ್ ನಲ್ಲಿ 6 ಗಂಟೆಗೆ ಬೆಂಗಳೂರಿಗೆ ರವಾನೆ ಮಾಡಲಾಗುವ ಬಗ್ಗೆ ಮೂಲಗಳ ಮಾಹಿತಿಯಿದೆ.

ಶನಿವಾರ ಹರ್ಷಿತ್ ಹಾಗೂ ಹಿಮಾಂಶು ಮಣಿಪಾಲದ ಕಡೆಗೆ ತಮ್ಮ ಕೆಟಿಎಮ್ ಬೈಕ್ ನಲ್ಲಿ ಅತಿವೇಗದಲ್ಲಿ ಬಂದಿದ್ದು ಮಣ್ಣಪಳ್ಳದ ಬಳಿ ನಿಯಂತ್ರಣ ತಪ್ಪಿದ ಬೈಕ್ ಬಿದ್ದು ಇಬ್ಬರು ರಸ್ತೆಗೆಸಯಲ್ಪಟ್ಟು ಹರ್ಶಿತ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡ ಹಿಮಾಂಶುವನ್ನು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

Comments are closed.