ಮಂಗಳೂರು, ಅ.07 : ಮಂಗಳೂರು ಜೈಲಿನಲ್ಲಿ ಇಷ್ಟು ದಿನ ಕೈದಿಗಳ ಮಧ್ಯೆ ಹೊಡೆದಾಟ ನಡೆಯುತ್ತಿತ್ತು. ಇದೀಗ ಕೈದಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಗುರುವಾರ ದ.ಕ.ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಅಪರಾಧ ಪ್ರಕರಣವೊಂದರಲ್ಲಿ ಬಂಧಿತರಾಗಿರುವ ಕೈದಿಗಳ ವಿಚಾರಣೆಯನ್ನು ನ್ಯಾಯಲಯದಲ್ಲಿ ಮುಗಿಸಿಕೊಂಡು ಮರಳಿ ಜೈಲಿಗೆ ಕರೆತರುತ್ತಿದ್ದ ವೇಳೆ ಕೈದಿಗಳು ಸಶಸ್ತ್ರ ಮೀಸಲು (ಡಿಎಆರ್) ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ ಜಿಲ್ಲಾ ನ್ಯಾಯಾಲಯದಲ್ಲಿ ಕೈದಿಗಳ ವಿಚಾರಣೆ ನಡೆಸಿದ ನಂತರ ಕೈದಿಗಳನ್ನು ಮರಳಿ ಜೈಲಿಗೆ ಕರೆತರುವಾಗ ಜೈಲ್ ಗೇಟ್ ಬಳಿ ಇಬ್ಬರು ಕೈದಿಗಳ ಮಧ್ಯೆ ವಾಗ್ವದ ನಡೆದಿದೆ.ಈ ಸಂದರ್ಭ ಈ ಗಲಾಟೆಯಲ್ಲಿ ತೊಡಗಿದ್ದ ಕೈದಿಗಳನ್ನು ಸಶಸ್ತ್ರ ಮೀಸಲು ಪಡೆಯ ಪೊಲೀಸರು ತಡೆಯಲು ಹೋದಾಗ ಡಿಎಆರ್ ಸಿಬ್ಬಂದಿಗಳ ಮೇಲೆ ಹಲವಾರು ಕೈದಿಗಳು ಒಟ್ಟು ಸೇರಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ತಕ್ಷಣ ಸ್ಥಳದಲ್ಲಿದ್ದ ಜೈಲು ಅಧಿಕಾರಿಗಳ ಮಧ್ಯೆ ಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಜೈಲಿನ ಅಧಿಕಾರಿಗಳಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Comments are closed.