ಮಂಗಳೂರು : ಬೃಹತ್ ಮರವೊಂದನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿಬಿದ್ದು ಮೆಸ್ಕಾಂ ಸಿಬ್ಬಂದಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಗರದ ಬಂಟ್ಸ್ ಹಾಸ್ಟೇಲ್ ಸಮೀಪದ ಕರಂಗಲ್ಪಾಡಿಯಲ್ಲಿ ಸಂಭವಿಸಿದೆ.
ಕರಂಗಲ್ಪಾಡಿ ಬಳಿಯಲ್ಲಿರುವ ಸೈಂಟ್ ಅಲೋಶಿಯಸ್ ಪ್ರಾಥಮಿಕ ಶಾಲೆಯ ಅವರಣದಲ್ಲಿ ಬ್ರಹತ್ ಗಾತ್ರದ ಗಾಳಿಮರವೊಂದನ್ನು ಕಡಿಯುತ್ತಿದ್ದ ವೇಳೆ ಅದು ಹಠಾತ್ತನೆ ಉರುಳಿ ಹೈಟೆನಷನ್ ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಈ ಸಂದರ್ಭ ವಿದ್ಯುತ್ ಕಂಬ ಮುರಿದುಬಿದ್ದಿದೆ. ಈ ಘಟನೆ ಸಂದರ್ಭ ಅಲ್ಲೇ ಪಕ್ಕದ ವಿದ್ಯುತ್ ಕಂಬ ಕೂಡಾ ಕಂಪಿಸಿದ್ದು, ಈ ವೇಳೆ ಇನ್ನೊಂದು ಕಂಬದಲ್ಲಿ ತಂತಿ ದುರಸ್ತಿ ಮಾಡುತ್ತಿದ್ದ ಲೈನ್ ಮ್ಯಾನ್ ಕೆಳಗೆ ಬಿದ್ದಿದ್ದಾರೆ. ಲೈನ್ ಮ್ಯಾನ್ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂದರ್ಭ ಅದೇ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಖಾಸಗಿ ಬಸ್ಸ್ಗೆ ಮುರಿದು ಬಿದ್ದ ತಂತಿ ಸಿಲುಕಿ ಎಳೆಯಲ್ಪಟ್ಟು ಎರಡು ಬದಿಗಳ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಗೆ ಬಿದ್ದಿದೆ. ಮೆಸ್ಕಾಂ ಇಲಾಖೆ ಮೊದಲೇ ವಿದ್ಯುತ್ ಸರಬರಾಜು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಈ ಘಟನೆಯಿಂದ ಹೆಚ್ಚಿನ ಅವಘಡಸಂಭವಿಸಿಲ್ಲ.
Comments are closed.