ಕರಾವಳಿ

ಕೊಲ್ಲೂರಿಗೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ; ನವರಾತ್ರಿ ಪೂಜೆ

Pinterest LinkedIn Tumblr

ಕುಂದಾಪುರ: ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಶುಕ್ರವಾರ ಉಡುಪಿ ಜಿಲ್ಲೆಯ ಕುಂದಾಪುರದ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಮೂಕಾಂಬಿಕೆ ದರ್ಶನ ಪಡೆದರು.

ಶುಕ್ರವಾರ ಬೆಳಿಗ್ಗೆ ಪತ್ನಿ ಜೊತೆಗೆ ಶೃಂಗೇರಿಯಿಂದ ಕೊಲ್ಲೂರಿಗೆ ಆಗಮಿಸಿದ ಮಾಜೀ ಪ್ರಧಾನಿ ದೇವೇಗೌಡರು ಕೊಲ್ಲೂರಿನಲ್ಲಿ ದರ್ಶನ ಮುಗಿಸಿ ವಿಶೇಷ ಪೂಜೆ ನೆರವೇರಿಸಿದರು.

kundapura_hd-devegouda_kollur-visit-3 kundapura_hd-devegouda_kollur-visit-2 kundapura_hd-devegouda_kollur-visit-1 kundapura_hd-devegouda_kollur-visit-4

ಇನ್ನು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜನರ ಒಳಿತಾಗಿ ಕಾವೇರಿ ನೀರಿಗಾಗಿ ಹೋರಾಟ ಕೈಗೊಂಡಿದ್ದು ರಾಜಕೀಯ ಗೊಂದಲಕ್ಕೆ ಕಾವೇರಿ ವಿಚಾರವನ್ನು ಬಳಸಿಕೊಂಡಿದ್ದು ವಿಷಾಧ ಎಂದು ಅಭಿಪ್ರಾಯಪಟ್ಟರು. ಅಲ್ಲದೇ ಕಾವೇರಿ ಹೋರಾಟದಂತೆ ಮಹಾದಾಯಿ ಹೋರಾಟಕ್ಕೂ ತನ್ನ ಬೆಂಬಲವಿದೆ ಎಂದ ಅವರು ನ್ಯಾಯಕ್ಕಾಗಿ ಸದಾ ಹೋರಾಟ ಮಾಡುವೆ ಎಂದರು. ಜಾಗ್ವಾರ್ ಸಿನೇಮಾ ಯಶಸ್ಸು ಗಳಿಸುತ್ತದೆ ಎಂದು ವಿಶ್ವಾಸವನ್ನು ಸುದ್ದಿಗಾರರೊಂದಿಗೆ ದೇವೇಗೌಡ ವ್ಯಕ್ತಪಡಿಸಿದರು.

Comments are closed.