ಕರಾವಳಿ

ಬೈಂದೂರು: ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗೋಡೆ ಕೊರೆದು ಕನ್ನ ಹಾಕಲು ಯತ್ನ

Pinterest LinkedIn Tumblr

ಕುಂದಾಪುರ: ಬೈಂದೂರಿನ ಯಡ್ತರೆ ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕಿನನ ಗೋಡೆ ಕೊರೆದು ಕಳ್ಳತನಕ್ಕೆ ಯತ್ನಿಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದ್ದು, ಬುಧವಾರ ಘಟನೆ ಬೆಳಕಿಗೆ ಬಂದಿದೆ.

byndoor_bank_theft-attempt-1 byndoor_bank_theft-attempt-2 byndoor_bank_theft-attempt-4 byndoor_bank_theft-attempt-3

ಮಂಗಳವಾರ ತಡರಾತ್ರಿ ಬೈಂದೂರಿನ ಯಡ್ತರೆಯ ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನ ಒಂದು ಭಾಗದ ಕಲ್ಲಿನ ಗೋಡೆಯನ್ನ ರಂಧ್ರ ಕೊರೆಯುವ ಮೂಲಕ ಒಳನುಸುಳಿದ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನಗೈದಿದ್ದಾರೆ. ಬ್ಯಾಂಕ್ ಎದುರಿನ ಶಟರ್ ಮುರಿಯದೇ ಒಳನುಗ್ಗಿ ಕಳವಿಗೆ ಯತ್ನಿಸಿದ್ದು, ಬ್ಯಾಂಕ್ ಒಳಗಡೆ ಅಳವಡಿಸಿದ್ದ ಸಿಸಿ ಕ್ಯಾಮರಾವನ್ನು ಹಾನಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ನರು, ಬೈಂದೂರು ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.