ಮಂಗಳೂರು, ಜೂ. 15:ಬಿಜೈ ಕಾಪಿಕಾಡ್ನ ಮನೆಯಂದರಲ್ಲಿ ಕೆಲಸಕಿದ್ದ ವ್ಯಕ್ತಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣದೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಅಶ್ವಿನಿಕುಮಾರ್ ಎಂಬವರು ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಿಜೈ ಕಾಪಿಕಾಡ್ನಲ್ಲಿರುವ ಅಶಕ್ತ ವೃದ್ಧ ತಂದೆ ತಾಯಿಯರನ್ನು ನೋಡಿಕೊಳ್ಳಲೆಂದು ನೇಮಿಸಿದ್ದ ಎಸ್.ಪಿ. ಮಂಜುನಾಥ್ ಎಂಬವರು ಜೂನ್ 13ರಂದು ಬೆಳಗ್ಗೆ ಅಂಗಡಿಗೆ ತೆರಳಿದವನು ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ.
ಮನೆಯಲ್ಲಿದ್ದ ತಾಯಿಯ 260 ಗ್ರಾಂ. ತೂಕದ ಚಿನ್ನಾಭರಣಗಳ ಬ್ಯಾಗನ್ನು ಕಳವುಗೈದಿದ್ದು, ಚಿನ್ನಾಭರಣದ ಮೊತ್ತ 6,78,000ರೂ. ಎಂದು ಅಶ್ವಿನಿಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Comments are closed.