ಕರಾವಳಿ

ಅಂತೋನಿ ದೇವರ ಮೂರ್ತಿ ಧ್ವಂಸ ಪ್ರಕರಣ: ಘಟನಾ ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ ಭೇಟಿ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಕಂಡ್ಲೂರಿನ ದೂಪದಕಟ್ಟೆ ಎಂಬಲ್ಲಿನ ಸಂತ ಅಂತೋನಿ ಪ್ರಾರ್ಥನಾ ಮಂದಿರದ ಎದುರಿಗಿರುವ ಸಂತ ಆಂತೋನಿಯವರ ಮೂರ್ತಿಯನ್ನು ಭಾನುವಾರ ತಡರಾತ್ರಿ ಕಿಡಿಗೇಡಿಗಳು ಒಡೆದು ಕೆಡವಿದ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಕೆ.ಅಣ್ಣಾಮಲೈ ಭೇಟಿ ನೀಡಿದ್ದಾರೆ.

Kundapura_Kandlur_Church Issue (1) Kundapura_Kandlur_Church Issue (5) Kundapura_Kandlur_Church Issue (2) Kundapura_Kandlur_Church Issue (3) Kundapura_Kandlur_Church Issue (4) Kundapura_Kandlur_Church Issue (6)

ಸೋಮವಾರ ರಾತ್ರಿ ವೇಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಪ್ರಾರ್ಥಾನಾ ಮಂದಿರಕ್ಕೆ ಸಂಬಂದಪಟ್ಟ ಮುಖ್ಯಸ್ಥರು ಹಾಗೂ ಧರ್ಮಗುರುಗಳೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೇದುಕೊಂಡರು. ಅಲ್ಲದೇ ಶೀಘ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇನ್ನು ಈ ಸಂದರ್ಭ ಸ್ಥಳೀಯರು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕೆಂದು ಎಸ್ಪಿ ಅವರ ಗಮನಕ್ಕೆ ತಂದರು. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಇದನ್ನೂ ಓದಿರಿ: http://kannadigaworld.com/kannada/karavali-kn/262263.html

Comments are closed.