ಉಡುಪಿ: ಮದ್ಯಪಾನದ ಚಟ ಹೊಂದಿದ್ದ ಕಾಲೇಜು ವಿದ್ಯಾರ್ಥಿಯೋರ್ವ ಯಾವುದೋ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಸಾಲಿಗ್ರಾಮ ಸಮೀಪದ ಕಾವಡಿ ಎಂಬಲ್ಲಿ ನಡೆದಿದೆ.
ಕಾವಡ್ಯ ಭಾಸ್ಕರ್ ಕಾಂಚನ್ ಅವರ ಪುತ್ರ ಚೇತನ್ (22) ಆತ್ಮಹತ್ಯೆಗೆ ಶರಣಾದ ಯುವಕ.
ಶನಿವಾರ ರಾತ್ರಿ ಕಾವಡಿ ಗ್ರಾಮದ ಜನತಾ ಕಾಲೋನಿ ಎಂಬಲ್ಲಿರುವ ಮನೆಯಲ್ಲಿ ಟಿ.ವಿ ನೋಡುತ್ತಿದ್ದ ಚೇತನ್ ತನ್ನ ತಮ್ಮನೊಂದಿಗೆ ಟಿ.ವಿ ರಿಮೋಟ್ ವಿಚಾರದಲ್ಲಿ ಗಲಾಟೆ ಮಾಡಿ ಕೋಪಗೊಂಡು ತನ್ನ ಕೊಠಡಿಗೆ ತೆರಳಿದ್ದು ಬಾಗಿಲು ಹಾಕಿಕೊಂಡಿದ್ದಾನೆ. ಬೆಳಿಗ್ಗೆ ಆತ ರೂಂನಿಂದ ಹೊರಬಾರದ್ದನ್ನು ಕಂಡು ಅನುಮಾನಗೊಂಡ ಮನೆಯವರು ಬಾಗಿಲು ತೆಗೆದು ನೋಡುವಾಗ ಘಟನೆ ಬೆಳಕಿಗೆ ಬಂದಿದೆ. ಈತ ಮನೆಯ ಮಹಡಿಗೆ ಬೆಡ್ಶೀಟ್ನ್ನು ಹಾಕಿ ಕುತ್ತಿಗೆಗೆ ನೇಣು ಹಾಕಿಕೊಂಡು ಒದ್ದಾಡುತ್ತಿದದ್ದು ಕೂಡಲೇ ಆತನನ್ನು ಕೆಳಗಿಳಿಸಿ ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೆ ಆತ ಇಹಲೋಕ ತ್ಯಜಿಸಿದ್ದ.
ಚೇತನ್ ಕುಡಿತದ ಚಟವನ್ನು ಹೊಂದಿದ್ದು ಯಾವುದೇ ಕೆಲಸವಿಲ್ಲದೆ ಮಾನಸಿಕವಾಗಿ ನೊಂದು ಈ ಕ್ರತ್ಯ ಮಾಡಿಕೊಂಡಿದ್ದಾನೆನ್ನಲಾಗಿದೆ.
ಘಟನೆ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.