ಕುಂದಾಪುರ: ಸಾಲಭಾದೆಯಿಂದ ಕಂಗೆಟ್ಟು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ ರೈತ ಕೊಲ್ಲೂರು ಸಮೀಪದ ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಹಾಲ್ಕಲ್ ನಿವಾಸಿ ಥಾಮಸ್ ಕುಟುಂಬಕ್ಕೆ ಸರಕಾರದ ಐದು ಲಕ್ಷ ಪರಿಹಾರ ಚೆಕ್ ವಿತರಿಸುವ ಕಾರ್ಯ ಶನಿವಾರ ಬೆಳಿಗ್ಗೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರ ನಿವಾಸದಲ್ಲಿ ನಡೆಯಿತು.
ಥಾಮಸ್ ಅವರ ಪತ್ನಿ ಮರಿಯಾ ಥಾಮಸ್ ಅವರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.
ಈ ಸಂದರ್ಭ ಸಹಾಯಕ ಕೃಷಿ ನಿರ್ದೇಶಕ ವಿ.ವಿ. ವಿಠಲರಾವ್, ಕೃಷಿ ಅಧಿಕಾರಿ ಪರಶುರಾಮ್, ಮುಖಂಡರಾದ ಸೈಮನ್ ಜಡ್ಕಲ್, ಪ್ರಭಾಕರ ಶೆಟ್ಟಿ ಜಡ್ಕಲ್, ರಮಣನ್ ಜಡ್ಕಲ್, ದೇವದಾಸ್ ಜಡ್ಕಲ್ ಮೊದಲಾದವರಿದ್ದರು.
ಹಾಲ್ಕಲ್ ನಿವಾಸಿ ಥಾಮಸ್ ಮಾರ್ಚ್ ತಿಂಗಳಲ್ಲಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ರಬ್ಬರ್, ತೆಂಗು ಹಾಗೂ ನರ್ಸರಿ ಮಾಡಿಕೊಂಡಿದ್ದ ಅವರು ವಿವಿಧ ಬ್ಯಾಂಕುಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಸಾಲ ಮಾಡಿ ತೀರಿಸಲಾಗದೇ ಈ ಕೃತ್ಯಕ್ಕೆ ಮುಂದಾಗಿದ್ದರು.
ಇದನ್ನೂ ಓದಿರಿ:
Comments are closed.