ಕರಾವಳಿ

ಬಾಳಿಗ ಹತ್ಯೆ ಪ್ರಕರಣ : ಶಂಕಿತ ಆರೋಪಿ ನರೇಶ್ ಶೆಣೈ ಬಗ್ಗೆ ಅಪಪ್ರಚಾರ :ವಾಟ್ಸಪ್ ಗ್ರೂಪ್ ವಿರುದ್ಧ ದೂರು.

Pinterest LinkedIn Tumblr

Baliga_Protest_Meravang_2

ಮಂಗಳೂರು,ಮೇ.24: ಮಂಗಳೂರಿನ ಆರ್ ಟಿಐ ಕಾರ್ಯಕರ್ತ ವಿನಾಯಕ ಪಿ. ಬಾಳಿಗ ಹತ್ಯೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ಶಂಕಿತ ಆರೋಪಿ ಯುವ ಬ್ರಿಗೇಡ್ ನ ನರೇಶ್ ಶೆಣೈ ಬಗ್ಗೆ ವಾಟ್ಸಪ್ ಗ್ರೂಪ್ ವೊಂದರಲ್ಲಿ ಅವಹೇಳನಕಾರಿ ಸಂದೇಶ ಬಂದಿದೆ ಎಂದು ಆರೋಪಿಸಿ ನರೇಶ್ ಶೆಣೈ ಪತ್ನಿ ಸುಮನಾ ಶೆಣೈ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ದೇವಳದ ಭಕ್ತರು ಎಂಬ ಹೆಸರಿನಲ್ಲಿರುವ ಗ್ರೂಪ್ ನಲ್ಲಿ 41 ಸದಸ್ಯರಿದ್ದು ಈ ಗ್ರೂಪ್ ನಲ್ಲಿ ಇತ್ತೀಚೆಗೆ ಒರ್ವ ಸದಸ್ಯ ನರೇಶ್ ಶೆಣೈ ಭಾವಚಿತ್ರ ಹಾಕಿ ಡೆಡ್ ಆರ್ ಅಲೈವ್ ನರೇಶ್ ಶೆಣೈ ವಾಂಟೆಡ್ ಎಂದು ಸಂದೇಶವನ್ನು ಹಾಕಿದ್ದರು.

ಈ ಸಂದೇಶವನ್ನು ಗ್ರೂಪ್ ನಲ್ಲಿದ್ದವರೊಬ್ಬರು ಸುಮನಾ ಶೆಣೈಗೆ ನೀಡಿದ್ದಾರೆ. ಇದರ ಆಧಾರದ ಮೇಲೆ ಸುಮನಾ ಶೆಣೈ ಅವರು 41 ಸದಸ್ಯರ ಗ್ರೂಪ್ ವಿರುದ್ಧ 2ನೇ ಜೆಎಂ ಎಫ್ ಸಿ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ.

ಮಾರ್ಚ್ 23ರಂದು ಮಂಗಳೂರು ನಗರದ ಬೆಸೆಂಟ್ ಕಾಲೇಜಿನ ಸಮೀಪ, ಪಿ.ವಿ.ಎಸ್.ಕಲಾಕುಂಜದ ಎದುರಿನ ಓಣಿಯೊಂದರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ಅವರ ನಿವಾಸದ ಎದುರೆ ದುಷ್ಕರ್ಮಿಗಳು ಹತ್ಯೆಗೈದಿದ್ದರು.

ದಿನಾಂಕ: 21-03-2016 ರಂದು ವಿನಾಯಕ ಪಾಂಡುರಂಗ ಬಾಳಿಗರವರು ಪ್ರತೀ ದಿನದಂತೆ ಬೆಳಿಗ್ಗೆ 05-45 ಗಂಟೆಗೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ ಹೋಂಡಾ ಪ್ಲೆಸರ್ ಕೆ.ಎ.19.ಇ.ಡಿ 3098 ರಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ವಿನಾಯಕ ಪಾಂಡುರಂಗ ಬಾಳಿಗರನ್ನು ತಡೆದು ನಿಲ್ಲಿಸಿದ ಮೂವರು ವ್ಯಕ್ತಿಗಳು ಯದ್ವಾತದ್ವಾ ತಲವಾರಿನಿಂದ ಕಡಿದು ಅವರು ಬಂದ ಬೈಕ್ ನಲ್ಲಿ ಪರಾರಿಯಾಗಿದ್ದರು,

ಬಾಳಿಗ ಹತ್ಯೆ ಪ್ರಕರಣದಲ್ಲಿ ನರೇಶ್ ಶೆಣೈ ಅವರನ್ನು ಪ್ರಶ್ನಿಸಲು ಪೊಲೀಸರು ನಿರ್ಧರಿಸಿದ್ದರು. ಆದರೆ ಹತ್ಯೆ ನಡೆದ ಬಳಿಕ ನರೇಶ್ ಶೆಣೈ ತಲೆಮರೆಸಿಕೊಂಡಿರುವುದರಿಂದ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ಈ ಮಧ್ಯೆ ನರೇಶ್ ಶೆಣೈ ಪರ ವಕೀಲರು ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

Comments are closed.