ಕರಾವಳಿ

ನ.13  ತುಳುವೆರೆ ಪರ್ಬ: ಚಪ್ಪರ ಮೂಹೂರ್ತ

Pinterest LinkedIn Tumblr

TULU_VERA_PRBHA_1

ಮಂಗಳೂರು,ನ.12 : ಡಿಸೆಂಬರ್ 12ರಿಂದ 14 ರ ವರೆಗೆ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿ ನಡೆಯುವ ವಿಶ್ವತುಳುವೆರೆ ಪರ್ಬದ ಅಂಗವಾಗಿ ನವೆಂಬರ್ 13 ರಂದು ಗುರುವಾರ ಬೆಳಿಗ್ಗೆ 10.30ಕ್ಕೆ ಚಪ್ಪರ ಮುಹೂರ್ತ ಕಾರ್ಯಕ್ರಮ ಜರಗಲಿದೆ.

ಸಹ್ಯಾದ್ರಿಯ ಅಡ್ಯಾರ್ ಕಾಲೇಜ್ ಆವರಣದಲ್ಲಿ ನಡೆಯುವ ಚಪ್ಪರ ಮುಹೂರ್ತ ಕಾರ್ಯಕ್ರಮದಲ್ಲಿ ಭಂಡಾರಿ ಬಿಲ್ಡರ್ಸ್‌ನ ಮಾಲಕ ಲಕ್ಷ್ಮೀಶ ಭಂಡಾರಿ, ಬೋಳಾರ ಮಾರಿಯಮ್ಮ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಸೀತಾರಾಮ್, ದಾಸ್ ಪ್ರಮೋಟರ್‍ಸ್‌ನ ಮಾಲಕ ಅನಿಲ್‌ದಾಸ್ ಮೊದಲಾದವರು ಭಾಗವಹಿಸಲಿದ್ದಾರೆ. ತುಳುವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಶ್ವತುಳುವೆರೆ ಪರ್ಬದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Write A Comment